ನರಿಕೊಂಬು ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದಲ್ಲಿ ಗಣೇಶ ಚತುರ್ಥಿ, ತೆನೆ ಹಬ್ಬ ಹಾಗೂ ಸಹಾಯಧನ ಹಸ್ತಾಂತರ

0
4


ಬಂಟ್ವಾಳ : ​*ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನ, ನರಿಕೊಂಬು, ಪಾಣೆಮಂಗಳೂರು ನಲ್ಲಿ ಶ್ರೀ ಗಣೇಶ ಚತುರ್ಥಿ ಹಬ್ಬ,ತೆನೆ ಹಬ್ಬ ಹಾಗೂ ಸಹಾಯಧನ ಹಸ್ತಾಂತರ ಕಾರ್ಯಕ್ರಮ ಸೆಪ್ಟಂಬರ್ 13ರ ಸೋಮವಾರ ಜರುಗಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ನಿರ್ಣಯದಂತೆ, ಅನಾರೋಗ್ಯದಿಂದ ಬಳಲುತ್ತಿರುವ ಭಕ್ತಾದಿಗಳಿಗೆ ಸಹಾಯಧನವಾಗಿ ತಲಾ ಹತ್ತು ಸಾವಿರ ರೂಪಾಯಿಗಳನ್ನು
​ ಫಲಾನುಭವಿಗಳಾದ ರಮೇಶ್ ಬಂಗಲಗುಡ್ಡೆ ಮತ್ತು ದೇವಪ್ಪ ಪೂಜಾರಿ ಅವರಿಗೆ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಘುನಾಥ ಸೋಮಾಯಾಜಿ ಸಮಿತಿಯ ಇತರ ಸದಸ್ಯರ ಉಪಸ್ಥಿತಿಯಲ್ಲಿ ಹಸ್ತಾಂತರಿಸಿದರು.