ಶಾಲಾ ಮಕ್ಕಳ ಸುರಕ್ಷತೆಗಾಗಿ ನಿರ್ಮಿಸಿದ ಮೇಲ್ಚಾವಣಿಯ ಹಸ್ತಾಂತರ ಕಾರ್ಯಕ್ರಮ

0
5

ಹಿಂದು ವಿದ್ಯಾದಾಯಿನೀ ಸಂಘದ ಆಡಳಿತಕ್ಕೊಳಪಟ್ಟ ವಿದ್ಯಾದಾಯಿನೀ ಆಂಗ್ಲ ಮಾಧ್ಯಮ ಶಾಲೆ CBSE ಸುರತ್ಕಲ್ ಇದರ ಶಾಲಾ ಮಕ್ಕಳ ಸುರಕ್ಷತೆಗಾಗಿ ನಿರ್ಮಿಸಿದ ಮೇಲ್ಚಾವಣಿಯ ಹಸ್ತಾಂತರ ಕಾರ್ಯಕ್ರಮವು ಸಂಘದ ಅಧ್ಯಕ್ಷರು ಜಯಚಂದ್ರ ಹತ್ವಾರ್ ರವರ ನೇತೃತ್ವದಲ್ಲಿ ಜರಗಿತ್ತು. ಈ ಸಂದರ್ಭದಲ್ಲಿ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರು ಶ್ರೀ ಶಂಕರನಾರಾಯಣ ಭಟ್ ರವರು ಸರಸ್ವತೀ ಪೂಜೆಯನ್ನು ನೆರವೇರಿಸಿದ್ದು ವಿದ್ಯಾದಾನ ಶ್ರೇಷ್ಠವಾದುದು ಹಾಗೂ ವಿದ್ಯಾದಾಯಿನೀ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವವರು ಮತ್ತು ಶಿಕ್ಷಣ ಪಡೆಯುತ್ತಿರುವವರೆಲ್ಲರಿಗೂ ಸರಸ್ವತಿ ಮಾತೆ ಹಾಗೂ ತಾಯಿ ವಿದ್ಯಾದಾಯಿನೀ ಸನ್ಮಂಗಲ ನೀಡಿ ಹರಸಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದರು.

ಹಿಂದು ವಿದ್ಯಾದಾಯಿನೀ ಸಂಘದ ಶ್ರೀ ಶ್ರೀರಂಗ ಹೊಸಬೆಟ್ಟು, ಯಚ್ ಯು ಅನಂತಯ್ಯ, ಯಮ್ ವೆಂಕಟ್ರಾವ್, ಯಚ್ ಯಲ್ ರಾವ್, ಪಿ ಪ್ರಸಿದ್ಧ, ಶಾಲೆಯ ಸಂಚಾಲಕರು ಐ ವಿಶ್ವರಾಜ್, ಪ್ರಾಂಶುಪಾಲರು ಡಾ ಶಶಿಕುಮಾರ್ ಕೆ ಸಿ, ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ನ್ಯಾಯವಾದಿ ರಾಘವೇಂದ್ರ ಯಚ್ ವಿ, ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀನಿವಾಸ ಕುಳಾಯಿ ಹಾಗೂ ಶಾಲೆಯ ಶಿಕ್ಷಕರು ಮತ್ತು ಶಿಕ್ಷಕಿಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.