ನಮ್ಮ ನಾಡ ಒಕ್ಕೂಟ ಉಡುಪಿ ತಾಲೂಕು ಸಮಿತಿಯ ವಾರ್ಷಿಕ ಮಹಾಸಭೆ ಮಲ್ಪೆ ಯಲ್ಲಿ ಇತ್ತೀಚಿಗೆ ನಡೆಯಿತು. ಈ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷರಾದ ನಕ್ವಾ ಯಾಹ್ಯಾ, ಪ್ರಧಾನ ಕಾರ್ಯದರ್ಶಿ ಫಾಝಿಲ್ ಆದಿ ಉಡುಪಿ, ಜಂಟಿ ಕಾರ್ಯದರ್ಶಿ ನಿಹಾರ್ ಅಹ್ಮದ್ ಕುಂದಾಪುರ ಮತ್ತು ಅಶ್ರಫ್ ಪಡುಬಿದ್ರಿ, ಮಾಜಿ ಜಿಲ್ಲಾ ಅಧ್ಯಕ್ಷರಾದ ಮುಷ್ತಾಕ್ ಬೆಳ್ವೆ, ಟ್ರಸ್ಟಿ ಪೀರು ಭಾಯಿ ಉಪಸ್ಥಿತರಿದ್ದರು. ನಂತರ ತಾಲೂಕು ಉಸ್ತುವಾರಿ ನಜೀರ್ ಸಾಹೇಬ್ ನೆಜಾರ್, ಚುನಾವಣಾ ಅಧಿಕಾರಿ ಅಶ್ರಫ್ ಪಡುಬಿದ್ರಿ ಮತ್ತು ತಾಜುದ್ದೀನ್ ಬ್ರಹ್ಮಾವರ ರವರು ಉಡುಪಿ ತಾಲೂಕು ಸಮಿತಿ ರಚನೆಯ ಪ್ರಕ್ರಿಯೆ ನಡೆಯಿತು 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಇಬಾದ್ ಉಸ್ಮಾನ್ ಉಪಾಧ್ಯಕ್ಷರಿಗೆ ಅಕ್ರಮಾಲಿ ಪ್ರದಾನ ಕಾರ್ಯದರ್ಶಿಯಾಗಿ ಇಫ್ತಿಕರ್ ಅಹಮದ್ ಜಂಟಿ ಕಾರ್ಯದರ್ಶಿಯಾಗಿ ಬಿಲಾಲ್ ಸಾಗರ ಕೋಶಾಧಿಕಾರಿಯಾಗಿ ಅಮಾನುಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಶಾಮು ಅಹಮದ್ ತಾಲೂಕು ಸಮಿತಿ ಸದಸ್ಯರುಗಳಾಗಿ ಅವೇಜ ಶೇಖ್, ಇಮ್ತಿಯಾಜ್, ಮುಮ್ತಾಜ್ ಅಲಿ ಹಾರೂನ್ ರಶೀದ್ ಆತ್ರಾಡಿ ಆಯ್ಕೆಯಾದರು.

