ಮೂಡುಬಿದಿರೆ ತಾಲೂಕಿನ ಕೊಡಂಗಲ್ಲು ಉಚ್ಚಂಗಿ ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವ ಮಾರ್ಚ್ 6 ರಿಂದ 8 ರ ತನಕ ನಡೆಯಲಿದೆ.
ರಾಣೆಯಾರ್ ಸಮಾಜದ ಈ ದೇವಸ್ಥಾನ ಆಡಳಿತಾಧಿಕಾರಿ ಹರ್ಷವರ್ಧನ್, ಪುರಸಭೆಯ ಹಿಂದಿನ ಅಧ್ಯಕ್ಷರಾದ ಪ್ರೇಮಾನಂದ ಪ್ರಭು, ರೂಪಾ ಶೆಟ್ಟಿ, ಕೊರಗಪ್ಪ, ಸುರೇಶ್ ಕೋಟ್ಯಾನ್, ಅಜಯ್ ಶೆಟ್ಟಿ, ಹಾಗೂ ಹಲವಾರು ಜನರ ಸಹಕಾರದೊಂದಿಗೆ ಕಾಂಪೌಂಡು, ಪ್ರಾಂಗಣ ಹಾಸುಗಲ್ಲು, ಮೇಲ್ಛಾವಣಿ, ಸಮುದಾಯ ಭವನ, ಇತ್ಯಾದಿ ಮೂಲಸೌಕರ್ಯಗಳನ್ನು ನಿರ್ಮಿಸಲಾಗಿದೆ.
ಮಾರ್ಚ್ ಆರರಿಂದ ಎಂಟರ ತನಕ ಬ್ರಹ್ಮಕಲಶೋತ್ಸವ ನಡೆಯಲಿದೆ. ಎಂದು ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ಸುರೇಶ್ ಕೋಟ್ಯಾನ್, ಆಡಳಿತ ಮಂಡಳಿ ಅಧ್ಯಕ್ಷ ದೇಜು, ಕಾರ್ಯದರ್ಶಿಗಳಾದ ಶಿವಪ್ರಸಾದ್ ಹೆಗ್ಡೆ, ಸೀತಾರಾಮ ಆಚಾರ್ಯ, ಸಂದೀಪ್, ಸತೀಶ್ ಕೋಟ್ಯಾನ್, ಸಂತೋಷ್ ಶೆಟ್ಟಿ, ಕೊರಗಪ್ಪ, ನಾಗೇಶ್, ಅಮೃತ ರಾಜ್, ರಮೇಶ್. ಹಾಜರಿದ್ದರು.
.

