ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನಪಾಡಿ ಸಜೀಪ ಮೂಡ ಶ್ರೀ ಕ್ಷೇತ್ರದಲ್ಲಿ ನಡೆಯುವ ಲಕ್ಷ ಜಪ ಯಜ್ಞ ಬ್ರಹ್ಮ ಕಲಶ ದಿನಾಚರಣೆ ಹಾಗೂ ಚತುರ್ಥ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಮಾನಿಗಳಿಗೆ ನೀಡುವ ಅನ್ನದಾನದ ಹಸಿರು ವಾಣಿ ಹೊರ ಕಾಣಿಕೆ ಮೆರವಣಿಗೆ ಬ್ರಹ್ಮ ಶ್ರೀ ಗುರು ನಾರಾಯಣ ಮಂದಿರದಿಂದ ಹೊರಟು ಶ್ರೀ ದೇವಾಲಯ ತಲುಪಿತು. ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಆಡಳಿತ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ದೇರಾಜೆ ಗುತ್ತು. ಕಾರ್ಯಾಧ್ಯಕ್ಷ ಶ್ರೀಕಾಂತ್ ಶೆಟ್ಟಿ ಸಂಕೇಶ. ಪಂಚಾಯತ್ ಮಾಜಿ ಅಧ್ಯಕ್ಷ ವಿಶ್ವನಾಥ್ ಬೆಲ್ಚಡ. ರಮೇಶ್ ಅನ್ನ ಪಾಡಿ. ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಳ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಜಯಪ್ರಕಾಶ್ , ಹರೀಶ್ ಬಂಗೇರ, ಭಾಸ್ಕರ, ಮನೋಜ, ಸುರೇಶ್ ಬಂಗೇರ, ಸಂಜೀವ ಪೂಜಾರಿ, ಲಿಂಗಪ್ಪ ಧೋಟ, ಸುಧಾಕರ ಮೊದಲಾದವರು ಉಪಸ್ಥಿತರಿದ್ದರು.

