ಯುವ ಲೇಖಕಿ ಹಾಗೂ ವಾಗ್ಮಿ,ಎಬಿವಿಪಿ ಸದಸ್ಯೆ ಕು .ರಿಶಲ್ ಬ್ರಿಟ್ನಿ ಫೆರ್ನಾಂಡಿಸ್ ಅವರ ಅತ್ಯುತ್ತಮ ಸಾಹಿತಿಕ ಸಾಧನೆಗೆ ಭಾರತ ಯುವ ಅಸೋಸಿಯೇಷನ್ ನವದೆಹಲಿ ಹಾಗೂ ಕಾರ್ಮಿಕ ಹಾಗೂ ಕೌಶಲ್ಯ ಸಚಿವಾಲಯ ಮತ್ತು , ಸಾಮಾಜಿಕ ನ್ಯಾಯ ಸಚಿವಾಲಯ ಮತ್ತು ಸಬಲೀಕರಣ ಮತ್ತು ಇತರ ಸಚಿವಾಲಯಗಳ ಜಂಟಿ ಆಶ್ರಯದಲ್ಲಿ ಭಾರತ ಸರ್ಕಾರದ ಭಾರತ್ ಮಂಟಪದಲ್ಲಿ ಶಿವರಾಜ್ ಸಿಂಗ್ ಚೌಹಾಣ್ , ಕೃಷಿ ಸಚಿವರು, ರಘುರಾಜ್ ಸಿಂಗ್ , ಉತ್ತರ ಪ್ರದೇಶ ಸರ್ಕಾರದ ಸಚಿವ , ವಿನಯ್ ಕುಮಾರ್ ಚೌಧರಿ ರಾಷ್ಟ್ರೀಯ ಬಿಜೆಪಿ ಒಬ್ಸಿ ಮೋರ್ಚಾ ಅಧ್ಯಕ್ಷರು ಹಾಗೂ ಇತರ ಸಚಿವರು ಮತ್ತು ಸಚಿವಾಲಯದ ಅಧಿಕಾರಿಗಳು ಉಪಸ್ಥಿತಿಯಲ್ಲಿ ದೇಶ ರತ್ನ ಪ್ರಶಸ್ತಿ 2025 ನೀಡಿ ಗೌರವಿಸಲಾಯಿತು.
ರಿಶೆಲ್ ಪ್ರಸ್ತುತ ಎಸ್ ಡಿ ಎಂ ಕಾನೂನು ಕಾಲೇಜಿನಲ್ಲಿ ಅಂತಿಮ ವರ್ಷದ ಎಲ್ ಎಲ್ ಬೀ ವಿದ್ಯಾರ್ಥಿನಿ. ಮೂಡಬಿದ್ರೆಯ ಶ್ರೀ ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿನಿ. ರಿಶೆಲ್ ಗೆ ಇತ್ತೀಚಿಗೆ ಲಿಟರೇಚರ್ ಟುಡೇ ಪತ್ರಿಕೆ ವತಿಯಿಂದ ವಾಯ್ಸ್ ಆಫ್ ಇಂಡಿಯಾ ಬಿರುದು ಹಾಗೂ ಟಾಪ್ ಟೆನ್ ಆಫ್ ದ ಇಯರ್ 2025 ಎಂಬ ಹೆಗ್ಗಳಿಕೆ ಇದೆ .

