ಮಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ದ.ಕ. ಜಿಲ್ಲಾ ಸಮಿತಿ ವತಿಯಿಂದ ಶಾರದಾ ವಿದ್ಯಾಲಯ ಮಂಗಳೂರು ಮತ್ತು ಯಕ್ಷರಾಧಾನ ಕಲಾಕೇಂದ್ರದ ಸಹಯೋಗದಲ್ಲಿ ವ್ಯಾಸ ಜಯಂತಿ ಆಚರಣೆ, ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವು ಇಂದು ಜು. ೧೦ರಂದು ಮಂಗಳೂರು ಕೊಡಿಯಾಲ್ಬೈಲ್ ನಲ್ಲಿರು ಶಾರದಾ ವಿದ್ಯಾಲಯದಲ್ಲಿ ಸಂಜೆ ೬ರಿಂದ ನಡೆಯಲಿದೆ.
ಶಿಕ್ಷಣ ತಜ್ಞ ಪ್ರೊ. ಪವನ್ ಕೀಣ್ಕೆರೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದು, ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಉದ್ಘಾಟನೆ ಮಾಡಲಿದ್ದಾರೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ.

