ಉಡುಪಿ : ಸರಸ್ವತಿ ದಾಸಪ್ಪ ಶೆಣೈ ಸಾಲಿಗ್ರಾಮ ದಾವಣಗೆರೆ , ಕಲಾ ಕುಂಚ ಸಂಸ್ಥೆಯ ವತಿಯಿಂದ ಇತ್ತೀಚಿಗೆ ಚೆನ್ನಗಿರಿ ವಿರೂಪಾಕ್ಷ ಕಲ್ಯಾಣ ಮಂಟಪ ದಾವಣಗೆರೆ , ಜರಗಿದ ಕನ್ನಡ ನಾಡು ನುಡಿ, ಕಲೆ, ಸಾಹಿತ್ಯ ಸಂಸ್ಕೃತಿ ಹೀಗೆ ವಿವಿಧ ಪ್ರಕಾರಗಳಲ್ಲಿ ಅತ್ಯುತ್ಯಮ ಸಾಧನೆ ಮಾಡಿದವರನ್ನು ಪರಿಗಣಿಸಿ 70ನೇ ಕನ್ನಡ ನಿತ್ಯೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಾದ ” ಸರಸ್ವತಿ ಸಾಧಕ ಸಿರಿ ರಾಷ್ಟ್ರ ಪ್ರಶಸ್ತಿಯನ್ನು ಸಂಗೀತ ಕ್ಷೇತ್ರದಲ್ಲಿ ಭಜನೆಯ ಮೂಲಕ ವಿಶೇಷ ಸಾಧನೆಗೈದ ಶ್ರೀಮತಿ ಮಾಯಾ ಕಾಮತ್ ಈಶ್ವರ ನಗರ ಮಣಿಪಾಲ (ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ) ಇವರಿಗೆ ಪ್ರತಿಷ್ಟಾನದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ನೀಡಿ ಗೌರವಿಸಿದರು. ಭಜನೆ ಶಿಕ್ಷಕಿ ರಮ್ಯ ಮಲ್ಯ ಕುಂದಾಪುರ, ಜ್ಯೋತಿ ಉಡುಪಿ, ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಣಿಪಾಲದ ಮಾಯಾ ಕಾಮತ್ ಗೆ ” ಸರಸ್ವತಿ ಸಾಧಕ ಸಿರಿ ರಾಷ್ಟ್ರ ಪ್ರಶಸ್ತಿ ‘ ಗೌರವ
RELATED ARTICLES