ಶ್ರೀ ರುದ್ರ ಪಠಣ ಸಮಿತಿ ಬಂಟ್ವಾಳ ವತಿಯಿಂದ ಪುತ್ತಿಗೆಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಮೂಡಬಿದ್ರೆ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ರುದ್ರ ನಮಕ ಚಮಕ ಗಣಪತಿ ಸೂಕ್ತ ದೇವಿ ಸೂಕ್ತ ಸೌರ ಸೂಕ್ತ ಮನ್ಯು ಸೂಕ್ತ ಆಘಮರ್ಶಣ ಸೂಕ್ತ ಮಂತ್ರ ಪುಷ್ಪ ಪಡಿಸಲಾಯಿತು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಪ್ರಧಾನ ಅರ್ಚಕ ಅನಂತ ಕೃಷ್ಣ ಅಡಿಗ, ಕಾರ್ಯಕ್ರಮದ ಸಂಘಟಕ ಎ ರವಿ ಶಂಕರ ಮೈಯ್ಯ, ಕೂಟ ಮಹಾ ಜಗತ್ತು ಮೂಡಬಿದ್ರೆ ಅಂಗ ಸಮಸ್ತೆ ಅಧ್ಯಕ್ಷ ವಿದ್ವಾನ್ ಡಾ ಸೋಮಶೇಖರ ಮಯ್ಯ, ಲೋಕೋಪಯೋಗಿ ಇಲಾಖೆ ನಿವೃತ್ತ ಇಂಜಿನಿಯರ್ ಎಂಶ್ರೀನಿವಾಸ ಹೊಳ್ಳ, ಆಳ್ವಾಸ್ ಕಾಲೇಜು ಉಪನ್ಯಾಸಕಚಂದ್ರಶೇಖರ ಮಯ್ಯ, ಉಜಿರೆ ಎಸ್ ಡಿ ಎಂ ಕಾಲೇಜು ಉಪನ್ಯಾಸಕ ಶಿವರಾಮ ಕಾರಂತ, ಕೃಷ್ಣ ಕುಮಾರ ಸೋಮಾಯಾಜಿ ಅರ್ಬಿ,ಎಂ ಶಾಂತರಾಮ ರಾವ್, ಎನ್ ರಾಮಚಂದ್ರ ಮೈಯ್ಯ, ಎಂ ಜಯರಾಮಮಯ್ಯ, ರವಿಶಂಕರ ಕಾರಂತ, ವಿಶಾಲ್ ಹೆಗ್ಗಡೆ, ಎ ದನೇಶ್ವರ ರಾವ್, ಮೊದಲಾದವರು ಭಾಗವಹಿಸಿದ್ದರು

