ದಕ್ಷಿಣ ಕನ್ನಡದ ಸ್ವರಾಜ್ ಮೈದಾನ, ಮೂಡಬಿದ್ರಿಯಲ್ಲಿ ಜನವರಿಯಿಂದ 30 ಫೆಬ್ರವರಿ 10 ರವರೆಗೆ ಆಗ್ನಿವೀರ್ ನೇಮಕಾತಿ ರ್ಯಾಲಿ ಆಯೋಜಿಸಲಾಗಿದೆ. ಈ ರ್ಯಾಲಿಯನ್ನು ಆರ್ಮಿ ನೇಮಕಾತಿ ಕಚೇರಿ, ಮಂಗಳೂರು ಹಾಗೂ ಸ್ಥಳೀಯ ನಾಗರಿಕ ಆಡಳಿತ ಸಹಾಯದಿಂದ ನಡೆಸಲಾಗುತ್ತಿದೆ.
ಈ ರ್ಯಾಲಿ ಕರ್ನಾಟಕದ 11 ಜಿಲ್ಲೆಗಳಿಂದ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನಡೆಯಲಿದೆ. ಇದರಲ್ಲಿ ಭಾಗವಹಿಸುವ ಜಿಲ್ಲೆಗಳು: ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ.
ಆಗ್ನಿವೀರ್ ವಿಭಾಗಗಳು :
*ಆಗ್ನಿವೀರ್ ಜನರಲ್ ಡ್ಯೂಟಿ
*ಆಗ್ನಿವೀರ್ ಟೆಕ್ನಿಕಲ್
*ಆಗ್ನಿವೀರ್ ಕ್ಲರ್ಕ್ / ಸ್ಟೋರ್ ಕೀಪರ್ ಟೆಕ್ನಿಕಲ್
*10ನೇ ಆಗ್ನಿವೀರ್ ಟ್ರೇಡ್ಸ್ಮನ್
*8ನೇ ಆಗ್ನಿವೀರ್ ಟ್ರೇಡ್ಸ್ಮನ್
ಆನ್ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ (CEE) ನಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಈ ರ್ಯಾಲಿಗೆ ಆಹ್ವಾನಿತರಾಗಿದ್ದಾರೆ. ಆನ್ಲೈನ್ CEE 30 ಜೂನ್ 2025 ರಿಂದ 10 ಜುಲೈ 2025 ರವರೆಗೆ ನಡೆಸಲಾಯಿತು. ಪರೀಕ್ಷೆಯ ಫಲಿತಾಂಶ www.joinindianarmy.nic.in ನಲ್ಲಿ ಪ್ರಕಟವಾಗಿದೆ. ಅರ್ಜಿದಾರರಿಗೆ ಈಗಾಗಲೇ ಅಡ್ಮಿಟ್ ಕಾರ್ಡ್ ನೀಡಲಾಗಿದ್ದು, ತಮ್ಮ ಖಾತೆ ಅಥವಾ ನೋಂದಾಯಿತ ಇಮೇಲ್ ಮೂಲಕ ಸಹ ಲಭ್ಯವಿದೆ.

