ವರದಿ ರಾಯಿ ರಾಜ ಕುಮಾರ
ಭಾರತೀಯ ಜನತಾ ಪಾರ್ಟಿಯ ಮೂಡುಬಿದಿರೆ ಮಲ್ಕಿ ಮಂಡಲದ ಯುವ ಮೋರ್ಚಾ ವಿಭಾಗದ ಕಾರ್ಯದರ್ಶಿಯಾಗಿ ಮೂಡುಬಿದಿರೆಯ ಗೌತಮ್ ರೈ ಆಯ್ಕೆಯಾಗಿರುತ್ತಾರೆ. ಸಂಘಟನಾ ಶಕ್ತಿಯಲ್ಲಿ ಸಮಾಜ ಸೇವೆಯನ್ನು ಮಾಡುತ್ತಾ ಜನರ ಪ್ರೀತಿಯನ್ನು ಗಳಿಸಿದ ಗೌತಮ್ ರೈ ಇದೀಗ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿರುತ್ತಾರೆ. ಪಕ್ಷವನ್ನು ಸಂಘಟಿಸಿ ಯುವಶಕ್ತಿಯನ್ನು ಬಲಿಷ್ಠ ಗೊಳಿಸುವ ಕಾರ್ಯದಲ್ಲಿ ಗೌತಮ್ ತೊಡಗಿಸಿಕೊಂಡಿರುವುದು ಕಂಡುಬರುತ್ತದೆ.
ಗೌತಮ್ ಅವರ ಆಯ್ಕೆಯಿಂದ ಯುವ ವಿಭಾಗ ಇನ್ನಷ್ಟು ಬಲಿಷ್ಠ ಗೊಳ್ಳುವ ಭರವಸೆಯನ್ನು ಮಂಡಲದ ಹಿರಿಯ ನಾಯಕರುಗಳು ವ್ಯಕ್ತಪಡಿಸಿರುತ್ತಾರೆ. ಹಾಗೂ ನೂತನ ಕಾರ್ಯದರ್ಶಿಯವರಿಗೆ ಅಭಿನಂದನೆಗಳನ್ನು ಪಕ್ಷದ ಹಿರಿಯ ನಾಯಕರು, ಶಾಸಕರು, ಕಾರ್ಯಕರ್ತರುಗಳು ಸಲ್ಲಿಸಿರುತ್ತಾರೆ.

