ಮೂಡುಬಿದಿರೆ ಮೆಸ್ಕಾಂ ಉಪವಿಭಾಗದ ಎಇಇ ಮೋಹನ್ ಟಿ. ಕಳಸಕ್ಕೆ ನಿಯೋಜನೆ

0
12

ಮೂಡುಬಿದಿರೆ ಮೆಸ್ಕಾಂ ಉಪವಿಭಾಗದ ನೂತನ ಎಇಇ ಆಗಿ ರಾಮಕೃಷ್ಣ ಐತಾಳ್ ಅಧಿಕಾರ ಸ್ವೀಕಾರ

ಮೂಡುಬಿದಿರೆ : ಮೆಸ್ಕಾಂ‌ ಉಪವಿಭಾಗದಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕಳೆದ ನಾಲ್ಕೂವರೆ ವರ್ಷಗಳಿಂದ ಸೇವೆ ಸಲ್ಲಿಸಿದ್ದ ಮೋಹನ್ ಟಿ.ಅವರಿಗೆ ಕಳಸಕ್ಕೆ ವರ್ಗಾವಣೆಯಾಗಿದೆ.

ಮೂಲ್ಕಿ ಮೆಸ್ಕಾಂ‌ ಉಪವಿಭಾಗದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ರಾಮಕೃಷ್ಣ ಐತಾಳ್ ಅವರು ಮೂಡುಬಿದಿರೆಯ ನೂತನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಮೋಹನ್ ಅವರು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಮೂಡುಬಿದಿರೆಯಲ್ಲಿ ಸೇವೆ ಸಲ್ಲಿಸಿ ಜನಪ್ರಿಯ ಅಧಿಕಾರಿಯಾಗಿದ್ದರು.

LEAVE A REPLY

Please enter your comment!
Please enter your name here