ಬಂಟ್ವಾಳ : ನಂದಾವರ ಚಿಕ್ಕಮೇಳ ಆರನೇ ವರ್ಷದ ಮಳೆಗಾಲದ ತಿರುಗಾಟ ಮನೆ ಮನೆಗೆ ಯಕ್ಷಗಾನ ಶ್ರೀ ಕ್ಷೇತ್ರ ನ0ದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ದೇವಸ್ಥಾನದಲ್ಲಿ ಗೆಜ್ಜೆ ಪೂಜೆಯೊಂದಿಗೆ ಪ್ರಥಮ ಸೇವೆ ಆಟ ಆಡಿ ತಿರುಗಾಟಕ್ಕೆ ಚಾಲನೆ ನೀಡಲಾಯಿತು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಪ್ರಧಾನ ಅರ್ಚಕ ಮಹೇಶ್ ಕುಮಾರ್ ಭಟ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ ಪ್ರಭಾಕರ ಶೆಟ್ಟಿ, ಮಾಜಿ ಅಧ್ಯಕ್ಷ ಪ ದ್ಯಾಣ ಅರವಿಂದ ಭಟ್, ಚಿಕ್ಕ ಮೇಳದ ಸಂಚಾಲಕ ಭಾಸ್ಕರ ಸರಪಡಿ ಹಿಮ್ಮೇಳ ಮುಮ್ಮೆಳದ ಕಲಾವಿದರು ಉಪಸ್ಥಿತರಿದ್ದರು.

