ಶಿವಛತ್ರಪತಿಗಳ ಶುದ್ಧೀಕರಣ ಅಭಿಯಾನಕ್ಕೆ 350 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ‘ರಾಷ್ಟ್ರೀಯ ಶುದ್ಧೀಕರಣ ದಿನ’ ಆಚರಣೆ : ಸೋಲಾಪುರದಲ್ಲಿ 5 ಜನರು ಧಾರ್ಮಿಕ ವಿಧಿವಿಧಾನಗಳೊಂದಿಗೆ ಮತ್ತೆ ಹಿಂದೂ ಧರ್ಮಕ್ಕೆ ಸೇರ್ಪಡೆ!

0
6

‘ಗಜ್ವಾ-ಎ-ಹಿಂದ್’ ಅನ್ನು ಪ್ರಖರವಾಗಿ ವಿರೋಧಿಸಿ ‘ಭಗವಾ-ಎ-ಹಿಂದ್’ ಸಾಕಾರಗೊಳಿಸಲು ಹಿಂದೂಗಳು ಸಂಘಟಿತರಾಗಬೇಕು ! – ಸುನಿಲ್ ಘನವಟ್

ಸೋಲಾಪುರ : ಛತ್ರಪತಿ ಶಿವಾಜಿ ಮಹಾರಾಜರು ಸರ್ಸೇನಾಪತಿ ನೇತಾಜಿ ಪಾಲಕರರನ್ನು ಶುದ್ಧೀಕರಿಸಿ ಹಿಂದೂ ಸಮಾಜಕ್ಕೆ ಹೊಸ ಆದರ್ಶವನ್ನು ನೀಡಿದರು. ಇಂದು ಸಹ ವಂಚನೆ, ಆಮಿಷ ಮತ್ತು ‘ಲವ್ ಜಿಹಾದ್’ ಮೂಲಕ ನಡೆಯುತ್ತಿರುವ ಮತಾಂತರಗಳನ್ನು ತಡೆಯಲು ಸಮಾಜ ಸಂಘಟಿತವಾಗಬೇಕು. ನಾವು ಕೇವಲ ಇತಿಹಾಸವನ್ನು ಓದುವವರಲ್ಲ, ಇತಿಹಾಸವನ್ನು ನಿರ್ಮಿಸುವ ಮಾವಳೆಯರಾಗಬೇಕು. ‘ಗಜ್ವಾ-ಎ-ಹಿಂದ್’ ಅನ್ನು ಪ್ರಖರವಾಗಿ ವಿರೋಧಿಸಿ ‘ಭಗವಾ-ಎ-ಹಿಂದ್’ ಸಾಕಾರಗೊಳಿಸುವ ಸಂಕಲ್ಪವನ್ನು ಪ್ರತಿಯೊಬ್ಬ ಹಿಂದೂ ಮಾಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯ ಸಂಘಟಕರಾದ ಸುನಿಲ್ ಘನವಟ್ ಅವರು ಪ್ರಖರ ಕರೆ ನೀಡಿದರು.

ರಾಷ್ಟ್ರೀಯ ಶುದ್ಧೀಕರಣ ದಿನದ ಅಂಗವಾಗಿ ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದೂ ರಾಷ್ಟ್ರ ಸೇನೆಯ ಜಂಟಿ ಆಶ್ರಯದಲ್ಲಿ ಅಶೋಕ ಚೌಕ್‌ನಲ್ಲಿರುವ ಲೋಟಸ್ ಮಲ್ಟಿಪರ್ಪಸ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈ ವರ್ಷ ಹಿಂದವೀ ಸ್ವರಾಜ್ಯದ ಎರಡನೇ ಸರ್ಸೇನಾಪತಿ ನೇತಾಜಿ ಪಾಲಕರ್ ಅವರ ಶುದ್ಧೀಕರಣಕ್ಕೆ (ಘರ್ ವಾಪಸಿಗೆ) ತಿಥಿಗನುಸಾರ 350 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿಶೇಷವೆಂದರೆ, ಈ ಐತಿಹಾಸಿಕ ದಿನದಂದು ಸೋಲಾಪುರದಲ್ಲಿ ಹಿಂದೂ ಧರ್ಮವನ್ನು ತೊರೆದು ಅನ್ಯ ಧರ್ಮಕ್ಕೆ ಹೋಗಿದ್ದ 5 ಜನರು ಸ್ವಇಚ್ಛೆಯಿಂದ ಮತ್ತು ಧಾರ್ಮಿಕ ವಿಧಿವಿಧಾನಗಳೊಂದಿಗೆ ಮತ್ತೆ ಹಿಂದೂ ಧರ್ಮಕ್ಕೆ ಸೇರ್ಪಡೆಯಾದರು. ಅಲ್ಲದೆ, ಈ ದಿನವನ್ನು ‘ರಾಷ್ಟ್ರೀಯ ಶುದ್ಧೀಕರಣ ದಿನ’ವನ್ನಾಗಿ ಆಚರಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯು ಸಮಸ್ತ ಹಿಂದೂ ಸಮಾಜಕ್ಕೆ ಮನವಿ ಮಾಡಿದೆ.

ಈ ಸಂದರ್ಭದಲ್ಲಿ ಘನವಟ್ ಮುಂದುವರಿದು ಮಾತನಾಡುತ್ತಾ, ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜರು ಧರ್ಮಕ್ಕಾಗಿ ಅಮಾನವೀಯ ಕಿರುಕುಳವನ್ನು ಸಹಿಸಿ ಬಲಿದಾನ ನೀಡಿದರು, ಆದರೆ ಪರಧರ್ಮವನ್ನು ಸ್ವೀಕರಿಸಲಿಲ್ಲ. ಅದೇ ನಿಷ್ಠೆಯನ್ನು ಪ್ರತಿಯೊಬ್ಬ ಹಿಂದೂ ಅಳವಡಿಸಿಕೊಳ್ಳಬೇಕು. ಅಲ್ಲದೆ, ಮತಾಂತರಗೊಂಡ ಹಿಂದೂಗಳನ್ನು ಮತ್ತೆ ಸ್ವಧರ್ಮಕ್ಕೆ ಗೌರವದಿಂದ ಕರೆತರಲು ನಮ್ಮ ಬಾಗಿಲುಗಳು ಯಾವಾಗಲೂ ತೆರೆದಿರಬೇಕು ಎಂದು ಪ್ರಮುಖವಾಗಿ ಉಲ್ಲೇಖಿಸಿದರು.

ಹಿಂದೂರಾಷ್ಟ್ರ ಸೇನೆಯ ರವಿ ಗೋಣೆ ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ, ಮತಾಂತರಗೊಂಡ ಹಿಂದೂಗಳನ್ನು ಮತ್ತೆ ಸ್ವಧರ್ಮಕ್ಕೆ ಕರೆತರಲು ನಡೆಸಲಾಗುತ್ತಿರುವ ನಿರಂತರ ಜಾಗೃತಿ ಕಾರ್ಯಕ್ರಮಗಳಿಗೆ ಸಮಾಜದಿಂದ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇಂದಿಗೂ ಅನೇಕ ಮತಾಂತರಿತ ವ್ಯಕ್ತಿಗಳು ಮರಳಿ ಹಿಂದೂ ಧರ್ಮಕ್ಕೆ ಬರಲು ಬಯಸುತ್ತಿದ್ದು, ಅವರನ್ನು ತಲುಪಿ ಗೌರವದಿಂದ ಸ್ವಧರ್ಮಕ್ಕೆ ಕರೆತರಲು ಎಲ್ಲರೂ ಸಂಘಟಿತರಾಗಿ ಶ್ರಮಿಸಬೇಕು ಎಂದು ಹೇಳಿದರು.

ಸಾಮಾಜಿಕ ವಿಶ್ಲೇಷಕ ಹಾಗೂ ಲೆಕ್ಕ ಪರಿಶೋಧಕ ಸರ್ವೇಶ ಮೇಹಂದಳೆ ಅವರು ಮಾತನಾಡಿ, ಬೃಹತ್ ಪ್ರಮಾಣದಲ್ಲಿ ನಡೆಯುತ್ತಿರುವ ಮತಾಂತರದಿಂದಾಗಿ ಅನೇಕ ಭಾಗಗಳಲ್ಲಿ ಹಿಂದೂ ಬಹುಸಂಖ್ಯಾತ ಸಮಾಜವು ಇಂದು ದುರದೃಷ್ಟವಶಾತ್ ಅಲ್ಪಸಂಖ್ಯಾತವಾಗುತ್ತಿದೆ. ಇದು ಕೇವಲ ಧಾರ್ಮಿಕ ವಿಷಯವಲ್ಲ, ಬದಲಿಗೆ ರಾಷ್ಟ್ರ ಮತ್ತು ಧರ್ಮದ ಅಸ್ತಿತ್ವದ ಮೇಲಾದ ಅತ್ಯಂತ ಗಂಭೀರವಾದ ಆಘಾತವಾಗಿದೆ. ಈ ಸವಾಲನ್ನು ಎದುರಿಸಲು ಹಿಂದೂ ಸಮಾಜವು ಈಗ ಹೆಚ್ಚು ಜಾಗರೂಕ, ಸಂಘಟಿತ ಮತ್ತು ಸಕ್ರಿಯವಾಗುವುದು ಕಾಲದ ಅಗತ್ಯವಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ತುಳಜಾಪುರದ ಮಹಂತ್ ಮಾವಜೀನಾಥ್ ಮಹಾರಾಜ್ ಅವರು ಮಾತನಾಡಿ, ‘‘ಸ್ವಧರ್ಮದಲ್ಲಿ ಸಾವು ಬಂದರೂ ಅದು ಕಲ್ಯಾಣಕಾರಿ, ಆದರೆ ಪರಧರ್ಮಕ್ಕೆ ಹೋಗುವುದು ಜೀವನಕ್ಕೆ ಅಪಾಯಕಾರಿ ಎಂದು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ. ಹಿಂದೂ ಧರ್ಮದಲ್ಲಿ ಮೋಕ್ಷ ಮತ್ತು ಮುಕ್ತಿಯ ಪರಿಕಲ್ಪನೆ ಇದೆ. ಕೇವಲ ಈ ಧರ್ಮದಲ್ಲಷ್ಟೇ ಮುಕ್ತಿ ಸಿಗಲು ಸಾಧ್ಯ. ಆದ್ದರಿಂದ ಹಿಂದೂಗಳು ತಮ್ಮ ಧರ್ಮದ ಶ್ರೇಷ್ಠತೆಯನ್ನು ಅರಿತು ಮತಾಂತರಗೊಳ್ಳುವವರಿಗೆ ಜಾಗೃತಿ ಮೂಡಿಸಬೇಕು ಮತ್ತು ಅವರನ್ನು ಸ್ವಧರ್ಮದಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸಬೇಕು’’ ಎಂದರು. ಈ ಸಂದರ್ಭದಲ್ಲಿ ಪ್ರಜ್ಞಾಪುರಿ ಜ್ಞಾನಪೀಠದ ಪೀಠಾಸೀನ ಧರ್ಮಾಧಿಕಾರಿ ಪ್ರಸಾದ್ ಪಂಡಿತ್ ಅವರೂ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.

‘ಭಗವಾ-ಎ-ಹಿಂದ್’ ಸಂಕಲ್ಪ! : ಕಾರ್ಯಕ್ರಮದ ಕೊನೆಯಲ್ಲಿ ಉಪಸ್ಥಿತರಿದ್ದವರು ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜರ ಪ್ರೇರಣೆಯಿಂದ ಧರ್ಮ ರಕ್ಷಣೆಗಾಗಿ ಕಾರ್ಯನಿರ್ವಹಿಸುವ ನಿರ್ಧಾರ ವ್ಯಕ್ತಪಡಿಸಿದರು. ಪರಧರ್ಮಕ್ಕೆ ಹೋದ ಪ್ರತಿಯೊಬ್ಬ ಹಿಂದೂ ಸ್ವಧರ್ಮಕ್ಕೆ ಗೌರವದಿಂದ ಮರಳುವವರೆಗೆ ಜಾಗೃತಿ, ಸಂಘಟನೆ ಮತ್ತು ಶುದ್ಧೀಕರಣದ ಕಾರ್ಯವನ್ನು ಇನ್ನಷ್ಟು ವೇಗವಾಗಿ ಮುನ್ನಡೆಸುವ ಸಂಕಲ್ಪವನ್ನು ಈ ವೇಳೆ ಮಾಡಲಾಯಿತು.