ತುಳು ಭಾಷೆಗೆ ಅಧಿಕೃತ ಮಾನ್ಯತೆ: ಮೂಡುಬಿದಿರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ತುಳು ಧ್ವಜ ಹಿಡಿದು ಪಟಾಕಿ ಸಿಡಿಸಿ ಸಂಭ್ರಮ

0
10

ಮೂಡುಬಿದಿರೆ : ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಘೋಷಿಸಿರುವ ಹಿನ್ನೆಲೆಯಲ್ಲಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮೂಡುಬಿದಿರೆಯ ಬಸ್ಸು ನಿಲ್ದಾಣದಲ್ಲಿ ತುಳು ಧ್ವಜ ಹಿಡಿದು ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.

ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್, ಕಾರ್ಯದರ್ಶಿ ಪುರಂದರ ದೇವಾಡಿಗ, ಪ್ರಮುಖರಾದ ಸುರೇಶ್ ಪ್ರಭು,ಸುರೇಶ್ ಕೋಟ್ಯಾನ್, vu ಕೊರಗಪ್ಪ,ರಾಜೇಶ್ ಕಡಲಕೆರೆ,ಮಿತ್ತಬೈಲು ವಾಸದೇವ ನಾಯಕ್, ಇಕ್ಬಾಲ್ ಕರೀಮ್, ಪ್ರವೀಣ್ ಪೂಜಾರಿ ಇರುವೈಲು,ಅನಿಶ್ ಡಿಸೋಜ,ಜೊಸ್ಸಿ ಮಿನೇಜಸ್, ಸಂತೋಷ್ ಶೆಟ್ಟಿ,ಸತೀಶ್ ಕೋಟ್ಯಾನ್,ಪ್ರವೀಣ್ ಮೆಂಡೊನ್ಸ ,ರುಕ್ಕಯ್ಯ ಪೂಜಾರಿ, ಕ್ಲಾರಿಯೋ, ಸತೀಶ್ ಭಂಡಾರಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.