ಬಂಟ್ವಾಳ : ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಶ್ರೀ ವಿಜಯಲಕ್ಷ್ಮಿ ಯುವಕ ಸಂಘ (ರಿ.)ನರಿಕೊಂಬು ಆಶ್ರಯದಲ್ಲಿ ಗೃಹಜೋತಿ ಯೋಜನೆಯ ಬಳಕೆದಾರರ ಮರುಪರಿಶೀಲನ ಅರ್ಜಿ ಕಾರ್ಯಕ್ರಮ ಸಂಘದ ಆವರಣದಲ್ಲಿ ನಡೆಸಲಾಯಿತು.
ಸಂಘದ ಮಾಜಿ ಅಧ್ಯಕ್ಷರಾದ ವಿಶ್ವನಾಥ ಪೂಜಾರಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಮಹಾ ಪೋಷಕರಾದ ಜಗನ್ನಾಥ ಬಂಗೇರ ನಿರ್ಮಾಲ್, ಅಧ್ಯಕ್ಷ ಪ್ರಸಾದ್, ಕರ್ಬೆಟ್ಟು, ಉಪಾಧ್ಯಕ್ಷ ರಾಜೇಶ್ ನಿರ್ಮಾಲ್, ಕಾರ್ಯದರ್ಶಿ ಕೃಷ್ಣಪ್ಪ ಅಂತರ, ಕೋಶಾಧಿಕಾರಿ ಮಾಧವ ಕರ್ಬೆಟ್ಟು, ಪ್ರಮುಖರಾದ ಪ್ರೇಮನಾಥ್ ಶೆಟ್ಟಿ ಅಂತರ, ಹರೀಶ್ ಟೈಲರ್, ಉಮೇಶ್ ಟೈಲರ್, ಸದಾಶಿವ ಮೊಗರ್ನಾಡ್, ಸುರೇಶ್ ಕುಲಾಲ್ ಮೊಗರ್ನಾಡ್, ಪಾಣೆಮಂಗಳೂರು ಜೆ ಇ ಪ್ರತಾಪ್, ಚೆನ್ನಪ್ಪ ಮೊದಲಾದವರು ಉಪಸ್ಥಿತರಿದ್ದರು.

