ಶ್ರೀ ಅಂಬಾಭವಾನಿ ಗಾಲಿಮಾರಿ ದೇವಸ್ಥಾನದ ಭಕ್ತರ ಪ್ರತಿಭಟನೆ : ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್ ಮತ್ತು ಮುಖ್ಯಾಧಿಕಾರಿ

0
33

ಕಾರ್ಕಳ : ಶ್ರೀ ಅಂಬಾಭವಾನಿ ಗಾಲಿಮಾರಿ ದೇವಸ್ಥಾನದ ಭಕ್ತಾದಿಗಳಿಂದ ಜೂನ್ 4 ರಂದು ನಡೆದ ಪ್ರತಿಭಟನೆಯ ಬೇಡಿಕೆಯಂತೆ, ಕಾರ್ಕಳ ತಹಶೀಲ್ದಾರ್ ಮತ್ತು ಪುರಸಭೆ ಮುಖ್ಯಾಧಿಕಾರಿಗಳು ಜಂಟಿಯಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯರಿಂದ ಸಮಸ್ಯೆಗಳನ್ನು ಆಲಿಸಿದ ಅವರು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವ ವಿಶ್ವಾಸವನ್ನು ದೇವಸ್ಥಾನದ ಭಕ್ತರಿಗೆ ನೀಡಿದರು.

​ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ರಾಜೇಶ್ ಕೋಟ್ಯಾನ್, ಅವಿನಾಶ್ ಶೆಟ್ಟಿ, ಸ್ಥಳೀಯ ಪುರಸಭಾ ಸದಸ್ಯರಾದ ಮೀನಾಕ್ಷಿ ಗಂಗಾಧರ್, ಮಾಜಿ ಪುರಸಭಾ ಸದಸ್ಯರಾದ ಸುನಿಲ್ ಕೋಟ್ಯಾನ್, ಪ್ರಕಾಶ್ ರಾವ್,ಅಧ್ಯಕ್ಷರದ ಬಾಲಕೃಷ್ಣ, ಕಾರ್ಯದರ್ಶಿ ಅಮರ್ ಶೆಟ್ಟಿಗಾರ್, ಹಾಗೂ ಸದಸ್ಯರಾದ ಶೈಲೇಶ್, ಸಾತ್ವಿಕ್, ಅಕ್ಷಯ ಕಾಮತ್ ,ನೇತ್ರಾ, ಶಾಂತಾ, ಪ್ರತಿಭಾ ಮತ್ತು ಇತರರು ಸ್ಥಳದಲ್ಲಿದ್ದರು.

LEAVE A REPLY

Please enter your comment!
Please enter your name here