ಮಾಣಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಿರಿಯ ವಿಭಾಗದ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡ ಸ. ಕಿ. ಪ್ರಾ. ಶಾಲೆ ಏಮಾಜೆ

0
131

ಮಾಣಿ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅನಂತಾಡಿಯಲ್ಲಿ ನ. 11 ನೇ ಮಂಗಳವಾರ ಜರುಗಿದ ಮಾಣಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸ. ಕಿ. ಪ್ರಾ. ಶಾಲೆ ಏಮಾಜೆಯ ಒಟ್ಟು 15 ವಿದ್ಯಾರ್ಥಿಗಳು ಭಾಗವಹಿಸಿ, 9 ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗುವುದರೊಂದಿಗೆ ಕಿರಿಯ ವಿಭಾಗದ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಕಿರಿಯ ವಿಭಾಗ (1-4ನೇ )
ಪ್ರಕೃತಿ 4ನೇ – ಕಥೆ ಹೇಳುವುದು ಪ್ರಥಮ, ಕನ್ನಡ ಕಂಠಪಾಠ ಪ್ರಥಮ,
ಖದೀಜ ಮಾಶಿತ 4ನೇ – ಧಾರ್ಮಿಕ ಪಠಣ ಅರೇಬಿಕ್ ಪ್ರಥಮ,
ಮನ್ವಿತ್ ಎಂ 3ನೇ – ಕ್ಲೇ ಮಾಡೆಲಿಂಗ್ ಪ್ರಥಮ,
ಜ್ಞಾನೇಶ್ 4ನೇ – ಆಶುಭಾಷಣ ಪ್ರಥಮ,ಆರ್ಯನ್ 3ನೇ – ಛದ್ಮವೇಷ ಪ್ರಥಮ, ಧಾರ್ಮಿಕ ಪಠಣ ಸಂಸ್ಕೃತ ದ್ವಿತೀಯ,
ಜಿ.ಎಂ.ಆಯುಷ್ ಆಚಾರ್ಯ – ಚಿತ್ರಕಲೆ ದ್ವಿತೀಯ,ಅದಿತಿ. ಕೆ. ಪಿ – ಅಭಿನಯ ಗೀತೆ ತೃತೀಯ,
ವಂದಿತಾ. ಎಲ್- ದೇಶಭಕ್ತಿ ಗೀತೆ ತೃತೀಯ.

ಹಿರಿಯರ ವಿಭಾಗ (5ರಿಂದ 7ನೇ )
ಶ್ಲೋಕ್.ರೈ.ಬಿ 5ನೇ- ಕ್ಲೇ ಮಾಡೆಲಿಂಗ್ ಪ್ರಥಮ,
ಸಂಪ್ರಿತ್ 5ನೇ – ಮಿಮಿಕ್ರಿ ಪ್ರಥಮ,ವರ್ಷ 5ನೇ – ಕನ್ನಡ ಪ್ರಬಂಧ ಪ್ರಥಮ, ಆಶುಭಾಷಣ ದ್ವಿತೀಯ,ರಿಧಿಕಾ ಶೆಟ್ಟಿ 5ನೇ – ಕವನ ವಾಚನ ದ್ವಿತೀಯ, ಕಥೆ ಹೇಳುವುದು ತೃತೀಯ ಬಹುಮಾನ ವನ್ನು ಪಡೆದುಕೊಂಡಿರುತ್ತಾರೆ ಪ್ರಥಮ ಸ್ಥಾನವನ್ನು ಪಡೆದುಕೊಂಡ ಎಲ್ಲ ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿಜೇತ ವಿದ್ಯಾರ್ಥಿಗಳನ್ನು ಶಾಲಾ ಪ್ರಾರ್ಥನಾ ಸಮಯದಲ್ಲಿ ಶಾಲಾ ಅಭಿವೃದ್ಧಿ ಸಮಿತಿ, ಶಾಲಾ ಶಿಕ್ಷಕ ವೃಂದ ವತಿಯಿಂದ  ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here