ಸಜೀಪ ಮಂಡಲದ ಸ ಜೀಪ ಮೂಢ ಸಜೀಪ ಮುನ್ನುರು ಗ್ರಾಮಗಳ ಹಿ0ದು ಸಂಗಮ ಅಂಗವಾಗಿ ಭವ್ಯ ಶೋಭಾ ಯಾತ್ರೆ ಸಂಗಮ ಧರ್ಮಸಭೆ 01-02-2026 ಭಾನುವಾರ ಸಂಜೆ 4:00ಗೆ ಸರಿಯಾಗಿ ಬೆಂಕ್ಯಾ -ಸುಭಾಷ್ ನಗರ ಸ ಜೀಪ ಮೂಡ ಇಲ್ಲಿ ಸಜೀಪ ಮಾಗಣೆತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆಯಲ್ಲಿ ಶ್ರೀ ಗುರುದೇವ ದತ್ತ ಸಂಸ್ಥಾನಂ ಶ್ರೀ ದತ್ತಾಂಜನೇಯ ಕ್ಷೇತ್ರ ದಕ್ಷಿಣ ಗಾಣಗಾಪುರ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಇದರ ಆಮಂತ್ರಣ ಪತ್ರವನ್ನು ಸ ಜೀಪ ಮಾಗಣೆ ಶ್ರೀ ಉಳ್ಳಾಲ್ತಿ ಕ್ಷೇತ್ರ ಸಂಕೇಶ ಬಂಡಾರ ಮನೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಬಿಡುಗಡೆಗೊಳಿಸಿದರು .
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಕಾಂತಾಡಿ ಗುತ್ತು ಗಡಿ ಪ್ರಧಾನರಾದ ಗಣೇಶ್ ನಾಯಕ್ ಯಾನೆ ಉಗ್ಗ ಶೆಟ್ಟಿ, ವಿವೇಕ್ ಶೆಟ್ಟಿ ನಗ್ರಿ ಗುತ್ತು, ಶ್ರೀಕಾಂತ್ ಶೆಟ್ಟಿ ಎಸ್, ರವೀಂದ್ರ ಕಂಬಳಿ, ಜಯ ಶಂಕರ ಬಾಸ್ರೀ ತಾಯ, ಕೆ ಕೃಷ್ಣ ಭಟ್, ರಮೇಶ್ ಕುಲಾಲ್, ಗಿರೀಶ್ ಕುಮಾರ್, ರವಿಶಂಕರ್ ಶೆಟ್ಟಿ, ಶೈಲೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

