ಬ್ರಹ್ಮಾವರ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕನ್ನಾರು ಚೇರ್ಕಾಡಿ ಇಲ್ಲಿ ಶರನ್ನವರಾತ್ರಿ ಮಹೋತ್ಸವ ಸೆ. 22ರಿಂದ ಅ. 2ರವರೆಗೆ ಜರಗಲಿದೆ.
ಸೆ. 22ರಂದು ಬೆಳಿಗ್ಗೆ ಸಪ್ರಶತಿ ಪಾರಾಯಣ, ಕದಿರು ಕಟ್ಟುವಿಕೆ, ಭಜನೆ, ಮಜಾಪೂಜೆ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಭಜನೆ, ಮಹಾಪೂಜೆ ನೆರವೇರಲಿದೆ. ಅ. 2ರವರೆಗೂ ಕ್ಷೇತ್ರದಲ್ಲಿ ಭಜನೆ, ಮಹಾಪೂಜೆ ಮದ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ಅ.1 ರಂದು ಬೆಳಿಗ್ಗೆ 8-00ರಿಂದ ಸಾಮೂಹಿಕ ಚಂಡಿಕಾಹೋಮ ನಡೆಯಲಿದೆ.

