ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿತ ಕ್ಷೇತ್ರದಲ್ಲಿ ತಾರೀಕು 20ರ ಕಾರ್ತಿಕ ಅಮಾವಾಸ್ಯೆಯ ಪರ್ವಕಾಲವಾದ ಗುರುವಾರದಂದು ರಂಗಪೂಜೆ ಸಹಿತ ದೀಪೋತ್ಸವ
ವು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಸರ್ವೇಶ ತಂತ್ರಿಗಳ ನೇತೃತ್ವದಲ್ಲಿ ಮಹಾ ಅನ್ನಸಂತರ್ಪಣೆಯೊಂದಿಗೆ ನೆರವೇರಲಿರುವುದು.
ಸಂಜೆ ಗಂಟೆ 6:30 ರಿಂದ ದೀಪೋತ್ಸವಕ್ಕೆ ಚಾಲನೆ ದೊರಕಲಿದೆ..
ಈ ರಂಗ ಪೂಜೆ ಸಹಿತವಾದ ದೀಪೋತ್ಸವದಲ್ಲಿ ಭಕ್ತರುಗಳು ಎಣ್ಣೆ ಬತ್ತಿ ಹಣತೆ ಸಮರ್ಪಿಸಲು ಅವಕಾಶವಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮನಾಗರಾಜ್ ತಿಳಿಸಿರುತ್ತಾರೆ..

