ಹೊಸಂಗಡಿ ಹಿಂದೂ ರುದ್ರ ಭೂಮಿಯಲ್ಲಿ ಸಾಮಾಜಿಕ ಅರಣ್ಯೀಕರಣ ಗಿಡನಾಟಿ ಕಾರ್ಯಕ್ರಮ

0
154

ಹೊಸಂಗಡಿ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಗುರುವಾಯನಕೆರೆ ಹೊಸಂಗಡಿ ವಲಯ, ಹಾಗೂ ಗ್ರಾಮ ಪಂಚಾಯತ್ ಹೊಸಂಗಡಿ,ರೋಟರಿ ಕ್ಲಬ್ ಸಿದ್ದಕಟ್ಟೆ ಪಲ್ಗುಣಿ,ಸಾರ್ವಜನಿಕ ಹಿಂದು ರುದ್ರಭೂಮಿ ಸಮಿತಿ ಇವರ ಸಹ ಯೋಗದೊಂದಿಗೆ ಶೌರ್ಯ ವಿಪತ್ತು ಘಟಕ ದ ಶ್ರಮದಾನ ಮೂಲಕ ಹೊಸಂಗಡಿ ಹಿಂದೂ ರುದ್ರ ಭೂಮಿಯಲ್ಲಿ ಸಾಮಾಜಿಕ ಅರಣ್ಯೀಕರಣ ಗಿಡನಾಟಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಹಲಸು, ಮಾವಿನ ಹಣ್ಣಿನ ಗಿಡ,ರಾಂಬೊಟೋನ್ ಗಿಡ ನೇರಳೆ, ವಾಟರ್ ಆಪಲ್, ಹುಣಸೆ ಗಿಡ, ಪುನರಪುಲಿ ಗಿಡ ಹಾಗೂ ವಿವಿಧ ಹಣ್ಣಿನ ಗಿಡ ನಾಟಿ ಮಾಡಲಾಯಿತ್ತು,

ಕಾರ್ಯಕ್ರಮ ದಲ್ಲಿ ಹೊಸಂಗಡಿ ಪಂಚಾಯತ್ ಅಧ್ಯಕ್ಷರು ಜಗದೀಶ್ ಹೆಗ್ಡೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ,ಹಾಗೂ ಕಾರ್ಯದರ್ಶಿ ಕಾಂತಪ್ಪ, ರೋಟರಿ ಕ್ಲಬ್ ಅಧ್ಯಕ್ಷರು ದುರ್ಗಾದಾಸ ಶೆಟ್ಟಿ, ಸಾರ್ವಜನಿಕ ರುದ್ರಭೂಮಿ ಅಧ್ಯಕ್ಷರು ಹರೀಶ್, ವಲಯದ ಮೇಲ್ವಿಚಾರಕರು ಶ್ರೀಮತಿ ವೀಣಾ,ಗುಂಡೂರಿ ಒಕ್ಕೂಟದ ಅಧ್ಯಕ್ಷರು ಸದಾನಂದ ಪೂಜಾರಿ, ಹೊಸಂಗಡಿ ಒಕ್ಕೂಟದ ಅಧ್ಯಕ್ಷರು ರೋಹಿತ ಕುಮಾರ,ಹೊಕ್ಕಡಿಗೋಳಿ ಒಕ್ಕೂಟದ ಅಧ್ಯಕ್ಷರು ಹರೀಶ್ ಆಚಾರ್ಯ, ಊರಿನ ಗಣ್ಯರಾದ ಧರ್ನಪ್ಪ ಪೂಜಾರಿ,ಹಾಗೂ ಗುಂಡೂರಿ,ಹಾಗೂ ಆರಂಬೋಡಿ ವಿಪತ್ತು ಘಟಕ ದ ಎಲ್ಲಾ ಸ್ವಯಂಸೇವಕರು ಮುರಾರ್ಜಿ ದೇಸಾಯಿ ಶಾಲಾ ವಿದ್ಯಾರ್ಥಿಗಳು ಹಾಗೂ ಸೇವಾಪ್ರತಿನಿಧಿ ಹರೀಶ್, ದಿನೇಶ, ಶ್ರೀ ಮತಿ ಪ್ರತಿಮಾ,vle ವಿಜಯಲಕ್ಷ್ಮಿ ಉಪಸಿತರಿದ್ದರು

LEAVE A REPLY

Please enter your comment!
Please enter your name here