ಪ್ಯಾರಾ ಲೀಗಲ್ ಸ್ವಯಂಸೇವಕರಿಗೆ (PLV) ಲೋಕ ಅದಾಲತ್ ಮತ್ತು ಪರಿಸರ ಜಾಗೃತಿ ಕುರಿತು ವಿಶೇಷ ಅರಿವು ಕಾರ್ಯಾಗಾರ

0
25

ಮಂಗಳೂರು : ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯ್ದೆ-1987ರ ಅಡಿಯಲ್ಲಿ ಕಾರ್ಯನಿರ್ವಹಿಸುವ ಖಾಯಂ ಜನತಾ ನ್ಯಾಯಾಲಯ ಹಾಗೂ ‘ ರಾಷ್ಟ್ರೀಯ ಲೋಕ ಅದಾಲತ್‌’ಗಳ ಮಹತ್ವದ ಕುರಿತು ಪ್ಯಾರಾ ಲೀಗಲ್ ಸ್ವಯಂಸೇವಕರಿಗೆ (PLV) ಜೂನ್ 23 ರಂದು ವಿಶೇಷ ಮಾಹಿತಿ ಮತ್ತು ಅರಿವು ಮೂಡಿಸುವ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

​ಸಾರ್ವಜನಿಕರ ವಿವಾದಗಳನ್ನು ಸೌಹಾರ್ದಯುತವಾಗಿ ಹಾಗೂ ಉಚಿತವಾಗಿ ಬಗೆಹರಿಸುವಲ್ಲಿ ಲೋಕ ಅದಾಲತ್‌ನ ಪಾತ್ರದ ಕುರಿತು ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.

ಇದರೊಂದಿಗೆ, NALSA ಮತ್ತು KSLSA ಮಾರ್ಗಸೂಚಿಗಳ ಅನ್ವಯ ಅಂತರರಾಷ್ಟ್ರೀಯ ಪರಿಸರ ದಿನಾಚರಣೆಯ ಅಂಗವಾಗಿ ಜೂನ್ 5 ರಿಂದ ಆಗಸ್ಟ್ 5, 2026 ರವರೆಗೆ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ “ಬೃಹತ್ ಗಿಡ ನೆಡುವಿಕೆ ಮತ್ತು ಪರಿಸರ ಜಾಗೃತಿ ಅಭಿಯಾನ”ವನ್ನು ಯಶಸ್ವಿಗೊಳಿಸಲು ಸ್ವಯಂಸೇವಕರು ಕೈಜೋಡಿಸಬೇಕೆಂದು ಖಾಯಂ ಜನತಾ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರುಗಳು ಕರೆ ನೀಡಿದರು.

​ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಗೌರವಾನ್ವಿತ ಸದಸ್ಯ ಕಾರ್ಯದರ್ಶಿಗಳಾದ ಜೈ ಬನ್ನಿಸ ಅವರು ಉಪಸ್ಥಿತರಿದ್ದು, ಸಾರ್ವಜನಿಕರಿಗೆ ಕಾನೂನು ನೆರವು ತಲುಪಿಸುವಲ್ಲಿ PLVಗಳ ಜವಾಬ್ದಾರಿಗಳ ಕುರಿತು ಪ್ರಮುಖ ಮಾರ್ಗದರ್ಶನ ನೀಡಿದರು.

ವರದಿ-ಮಂದಾರ ರಾಜೇಶ್ ಭಟ್

LEAVE A REPLY

Please enter your comment!
Please enter your name here