ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠದ ಶ್ರೀರಾಮ ದಿಗ್ವಿಜಯ ರಥ ” ಪುರಪ್ರೇವೇಶ

0
99

ಉಡುಪಿ: ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಬ್ರಹ್ಮಾವರ , ಇಲ್ಲಿನ  ಶ್ರೀ  ರಘುನಾಯಕ  ಜಪ ಕೇಂದ್ರ ಕ್ಕೆ  ನ 13 ರ ಗುರು ವಾರ ಸಂಜೆ ನೆಡೆಯಿತು ,      ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೆಯ ಸ್ವಾಮೀಜಿಯವ ಮಠ ಪರಂಪರೆಯ  550 ವರ್ಷದ  ಆಚರಣೆಯ  ಪ್ರಯುಕ್ತ  ” ಶ್ರೀರಾಮ ದಿಗ್ವಿಜಯ ರಥ  ” ಬದರಿ ಕ್ಷೇತ್ರ ದಿಂದ ಆರಂಭ ಗೊಂಡು ವಾರಾಣಸಿ , ಅಯೋದ್ಯೆ , ಮುತಾಂದಹ ವಿವಿಧ ಪುಣ್ಯ  ಕ್ಷೇತ್ರ ಗಳಿಗೆ ಭೇಟಿ ನೀಡಿ ಸಾಗಿ ಬಂದ  ” ಶ್ರೀರಾಮ ದಿಗ್ವಿಜಯ ರಥ  “ವನ್ನು ಹಳೇ  ಡಯಾನ ವೃತ್ತದ ಬಳಿ ಪೂರ್ಣ ಕುಂಭ ಸ್ವಾಗತ  , ಮಂಗಳವಾದ್ಯ  , ಚಂಡೆವಾದನ , ಶ್ರೀ ರಾಮನಾಮ  ಸ್ಮರಣೆ ಪಠಿಸುತ್ತಾ   ದೇವಳಕ್ಕೆ ಕರೆತರಲಾಯಿತು.                                                                      ಶ್ರೀ ದೇವರ ಸನ್ನಿಧಿಯಲ್ಲಿ ಸಮೂಹಿಕ ಪ್ರಾರ್ಥನೆ ,ಧಾರ್ಮಿಕ ಪೂಜಾ ಕಾರ್ಯಗಳು ವಿನಾಯಕ ಭಟ್ , ದಯಾಘನ್ ಭಟ್   ,   ದೀಪಕ್ ಭಟ್  ಹಾಗೂ ಮಠದ   ಅರ್ಚಕವೃಂದವರು ನಡೆಸಿಕೊಟ್ಟರು.                                                                                                                                              

 ದೇವರಿಗೆ ವಿಶೇಷ ಅಲಂಕಾರ , ಶ್ರೀ  ರಾಮ ನಾಮ ಜಪ ಪಠಣ , ಭಜನಾ ಸೇವೆ,   ದೀಪಾಲಂಕಾರ ಸೇವೆ  , ಪ್ರಸನ್ನ ಪೂಜೆ  ಮಹಾಪೂಜೆ ಬಳಿಕ   ಪ್ರಸಾದ ವಿತರಣೆ , ಸಮಾರಾಧನೆ ನಡೆಯಿತು. 

   ರಾಮ ನಾಮ ಜಪ ಅಭಿಯಾನ ಸಮಿತಿಯ  ದೀಪಕ್ ಶಾನ್ ಭಾಗ್ , ಶಂಕರ್ ಶೆಣೈ , ಸಂದೀಪ್ ನಾಯಕ್ , ಜಗದೀಶ್ ಪೈ,  ಭಾಸ್ಕರ್ ಶೆಣೈ  , ಮಟ್ಟಾರ್  ಸತೀಶ್ ಕಿಣಿ  , ರಾಜೇಶ್ ಪೈ , ವಸಂತ್ ಕಿಣೆ  , ಪ್ರಕಾಶ್ ಶೆಣೈ , ಹಾಗೂ ದೇವಳದ ಆಡಳಿತ ಮಂಡಳಿಯ ಸದಸ್ಯರು,   ಜಿ ಎಸ್ ಬಿ  ಮಹಿಳಾ ಮಂಡಳಿ ಸದಸ್ಯರು, ಜಿ ಎಸ್ ಬಿ ಯುವಕ  ಮಂಡಳಿಯ ಸದಸ್ಯರು ಶ್ರೀ ರಾಮನಾಮ ಜಪ ಅಭಿಯಾನದ ಸಮಿತಿಯ ಸದಸ್ಯರು  ಸಹಕರಿಸಿದರು ,  2 ಸಾವಿರಕ್ಕೊ ಹೆಚ್ಚಿನ  ಸಮಾಜಬಾಂಧವರು ಉಪಸ್ಥರಿದ್ದರು.

LEAVE A REPLY

Please enter your comment!
Please enter your name here