
ಬೆಳ್ತಂಗಡಿ : ಜ್ಞಾನಭಾರತಿ ಇಂಗ್ಲಿಷ್ ಮೀಡಿಯಂ ಸ್ಕೂಲ್, ಇಳಂತಿಲ ಇಲ್ಲಿ 2026-27ನೇ ಸಾಲಿನ ವಿದ್ಯಾರ್ಥಿ ಸಂಸತ್ತಿನ ಪ್ರಮಾಣ ವಚನ ಸ್ವೀಕಾರ ಸಮಾರಂಭವು ದಿನಾಂಕ **23ನೆ ಜೂನ್ _ ರಂದು ಶಾಲಾ ಸಭಾಂಗಣದಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ನೆರವೇರಿತು.
ಶಾಲಾ ಮುಖ್ಯೋಪಾಧ್ಯಾಯರು ನೂತನ ನಾಯಕರಿಗೆ ಬ್ಯಾಡ್ಜ್ ತೊಡಿಸಿ ಪ್ರಮಾಣ ವಚನ ಬೋಧಿಸಿದರು. ವಿದ್ಯಾರ್ಥಿ ನಾಯಕರು ಶಾಲೆಯ ನಿಯಮ, ಶಿಸ್ತು ಮತ್ತು ಮೌಲ್ಯಗಳನ್ನು ಎತ್ತಿಹಿಡಿದು, ಎಲ್ಲಾ ವಿದ್ಯಾರ್ಥಿಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುವುದಾಗಿ ಪ್ರತಿಜ್ಞೆ ಮಾಡಿದರು.

ಶಾಲಾ ನಾಯಕಿ ಅಮೀನಾ ಮುಬಾಶಿರ 9ನೇ ತರಗತಿ ಹಳೇಗೇಟು
ತಮ್ಮ ಭಾಷಣದಲ್ಲಿ ಮುಖ್ಯೋಪಾಧ್ಯಾಯರು, “ನಾಯಕತ್ವ ಎಂದರೆ ಸೇವೆ, ಮಾದರಿ ಮತ್ತು ಧೈರ್ಯ. ಶಿಸ್ತು, ಪ್ರಾಮಾಣಿಕತೆ ಮತ್ತು ಏಕತೆಯಿಂದ ಶಾಲೆಯ ಹೆಸರನ್ನು ಎತ್ತರಕ್ಕೆ ಕೊಂಡೊಯ್ಯಿರಿ” ಎಂದು ಕರೆ ನೀಡಿದರು.
2026-27ನೇ ಸಾಲಿನ ಆಯ್ಕೆಯಾದ ವಿದ್ಯಾರ್ಥಿ ಸಂಸತ್ತಿನ ಸದಸ್ಯರು:
ಶಾಲಾ ವಿದ್ಯಾರ್ಥಿ ನಾಯಕಿ (SPL) – ಅಮೀನಾ, 9ನೇ ತರಗತಿ, ಹಳೆಗೇಟು
ಸಹಾಯಕ ಶಾಲಾ ವಿದ್ಯಾರ್ಥಿ ನಾಯಕಿ (ASPL) – ಶಿಫಾನಾ, 9ನೇ ತರಗತಿ, ಉಪ್ಪಿನಂಗಡಿ
ಕ್ರೀಡಾ ಸಚಿವ – ಶಾಹಿಲ್, 9ನೇ ತರಗತಿ, ಕೊಪ್ಪಳ
ಆರೋಗ್ಯ ಸಚಿವೆ * – ಸನಾ, 9ನೇ ತರಗತಿ, ಹಿರೆಬಂಡಾಡಿ
ಸಾಂಸ್ಕೃತಿಕ ಸಚಿವೆ – ರೈಫಾ, 9ನೇ ತರಗತಿ, ಕೊಪ್ಪಳ
ಶಿಸ್ತು ಸಚಿವ – ಕಾಸಿಂ, 9ನೇ ತರಗತಿ, ನೆಕ್ಕಿಲಾಡಿ
ಶಿಕ್ಷಣ ಸಚಿವೆ – ಫಾತಿಮಾ, 8ನೇ ತರಗತಿ, ನೆಕ್ಕಿಲಾಡಿ
ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ನೂತನ ನಾಯಕರಿಗೆ ಶಾಲೆಯ ವತಿಯಿಂದ ಅಭಿನಂದನೆಗಳು ಸಲ್ಲಿಸಲಾಯಿತು.
ವರದಿ: ಶಾಲಾ ವಾರ್ತಾ ವಿಭಾಗ
