ಉಡುಪಿ ಎ 19 : ಉಡುಪಿ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ ( ರಿ ) ಕಿದಿಯೂರು ಹೋಟೆಲಿನ ಅನಂತಶಯನ ಸಭಾಂಗಣದಲ್ಲಿ ಆದಿತ್ಯವಾರ ಎಂಜಿನಿಯರ್ ಮೀಟ್ ಜರಗಿತು , ಮುಖ್ಯ ಅತಿಥಿ ಯಾದ ಉಡುಪಿ ಅಂಬಾಗಿಲಿನ ಕ್ಲಾಸಿಕ್ ಬಿಲ್ಡರ್ಸ್ ಮಾಲಕರಾದ ಪ್ರಭಾಕರ್ ಜಿ ರವರು ಉಡುಪಿ ಸಿವಿಲ್ ಎಂಜಿನಿಯರ್ಸ್ ಎಸೋಸಿಯೇಷನ್ ವಾಹನಗಳ ಸ್ಟಿಕರ್ ಬಿಡುಗಡೆ ಮಾಡಿ ವಿತರಸಿದರು , ಈ ಬಾರಿ ದ್ವಿತೀಯ ಪಿ ಯು ಸಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಅತಿಥಿಗಳಾಗಿ ಉಡುಪಿ ನಗರಸಭೆಯ ಎಂಜಿನಿಯರ್ ರಾದ ಚೇತನ್ , ಸತ್ಯ , ದಿವಾಕರ್ , ಕಾರ್ತಿಕ್ ಭಾಗವಹಿಸಿ , ತಮ್ಮ ಅನಿಸಿಕೆ ವ್ಯಕ್ತಪಡಿಸಿ , ಹೊಸ ಕಟ್ಟಡ ನಿರ್ಮಾಣ ಕ್ಕೆ ಕಾನೂನಿನ ಬಗ್ಗೆ ಸಲಹೆ , ನಿಮಯವಣಿಗಳನ್ನು ವಿವರಸಿ ಉಡುಪಿ ಅಭಿವೃದ್ಧಿಗೆ ಎಲ್ಲರ ಸಹಕಾರ ಬೇಕು ಎಂದು ಕೋರಿದರು , ಸಿವಿಲ್ ಇಂಜಿನಿಯರ್ ರವರಿಗೆ ನಗರ ಸಭೆವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು
ಮುಖ್ಯ ಅತಿಥಿ ಹಾಗೂ ಸಭೆಯ ಅಧ್ಯಕ್ಷತೆ ವಹಿಸಿದ ಕ್ಲಾಸಿಕ್ ಬಿಲ್ಡರ್ಸ್ ಎಮ್ ಡಿ ಇಂಜಿನಿಯರ್ ಪ್ರಭಾಕರ್ ಸುಮಾರು 31 ವರ್ಷಗಳಿಂದ ನಿರ್ಮಾಣ ಕ್ಷೇತ್ರ ದಲ್ಲಿ ವಿಶೇಷ ಸಾಧನೆಗೆ ” ಗ್ಲೋ ಬಲ್ ಅಚ್ಚುಮೆಂಟ್ಸ್ ಎವರ್ಬ್ ” ಪ್ರಶಸ್ತಿ ವಿಜೇತರಾದ ಇವರ ವಿಶಿಷ್ಟ ಸೇವೆಯನ್ನು ಗುರುತಿಸಿ ಸಂಸ್ಥೆಯ ವತಿಯಿಂದ ಶಾಲು ಹೊದಿಸಿ , ಹೊ ಹಾರ , ಸ್ಮರಣಿಕೆ ನೀಡಿ , ಪ್ರಭಾಕರ್ ದಂಪತಿಗಳನ್ನು ಗೌರವಿಸಲಾಯಿತು
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಗಣೇಶ್ ಬೈಲೂರು , ,ಭರತ್ ಭೂಷಣ , ಸಂಸ್ಥೆಯ ಅಧ್ಯಕ್ಷರಾದ ಕೆ ರಂಜನ್ ಸ್ವಾಗತಿಸಿದರು ,ಪ್ರಧಾನ ಕಾರ್ಯದರ್ಶಿ ಕೆ ಹರೀಶ್ ಪ್ರಸ್ತಾವನೆ ಗೈದರು , ಖಜಾಂಚಿ ಪಾಡಿಗಾರು ಲಕ್ಷ್ಮೀ ನಾರಾಯಣ ಉಪಧ್ಯಾಯ ವರದಿ ವಾಚಿಸಿದರು ,ಚಂದ್ರಶೇಖರ್ ರಾವ್ ಕೊಡವೂರು ನಿರೂಪಣೆ ಗೈದರು , ಸಂಸ್ಥೆಯ ಸದಸ್ಯರಿಂದ ಮನೋರಂಜನೆ ಕಾರ್ಯಕ್ರಮ ನೆಡೆಯಿತು , ಸಂಘದ ಪಧಾದಿಕಾರಿಗಳು , ನೂರಾರು ಸದಸ್ಯರು ಉಪಸ್ಥರಿದ್ದರು