ಉಂಬೆಟ್ಟು ದ.ಕ. ಜಿ, ಪಂ ಉನ್ನತಿಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಗಿಡ ನಾಟಿ ಕಾರ್ಯಕ್ರಮ

0
308

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ಮುಡುಕೋಡಿ ಗ್ರಾಮದ ಉಂಬೆಟ್ಟು ದ,ಕ, ಜಿ, ಪಂ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ಯಲ್ಲಿ
ಪರಿಸರ ಗಿಡ ನಾಟಿ ಕಾರ್ಯಕ್ರಮವನ್ನು ಪಂಚಾಯತ್‌ ಉಪಾಧ್ಯಕ್ಷರು ಉಮೇಶ್ ರವರು ಗಿಡ ನಾಟಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

,ಶಾಲಾ ಅಭಿವೃದ್ಧಿ ಅಧ್ಯಕ್ಷರು ಧನಂಜಯ ಜೈನ ಮಾತನಾಡಿ ಗಿಡಗಳು ಮಾನವನ ದೇಹದಲ್ಲಿ ಒಂದು ಭಾಗ ಅವುಗಳನ್ನು ಸರಿಯಾಗಿ ಉಳಿಸಿ ಬೆಳೆಸುವುದು ಪರಿಸರ ಸಂರಕ್ಷಣೆಯ ಬಗ್ಗೆ ಪರಿಸರದಿಂದ ಸಿಗುವ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು ಹಾಗೂ ಯೋಜನೆಯ ಶಾರ್ಯ ವಿಪತ್ತು ಘಟಕ ದ ಸ್ವಯಂ ಸೇವಕರು ಶಾಲೆ ಯ ಹೊರಾಂಗಣ ದಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡ ನಾಟಿ ಮಾಡಿದರು ಒಕ್ಕೂಟದ ಅಧ್ಯಕ್ಷರು, ಹರೀಶ್ ಹಾಗೂ ನಳಿನಾಕ್ಷಿ, ಶಾಲಾ ಶಿಕ್ಷಕರು ಸುನಂದಾ ಕೃಷಿ ಮೇಲ್ವಿಚಾರಕರು, ಕೃಷ್ಣ ವಲಯದ ಮೇಲ್ವಿಚಾರಕರು ಶ್ರೀಮತಿ ಶಾಲಿನಿ, ಶೌರ್ಯವಿಪತ್ತು ಸ್ವಯಂ ಸೇವಕರಾದ ನಾರಾಯಣ, ಕೃಷ್ಣಪ್ಪ, , ಶೀತಲ, ಮೀನಾಕ್ಷಿ, ಸದಾನಂದ (ಸಂಯೋಜಕರು) ಒಕ್ಕೂಟದ ಪದಾಧಿಕಾರಿಗಳು ದತ್ತ ಕುಮಾರ್ ಸಹ ಶಿಕ್ಷಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಸೇವಾಪ್ರತಿನಿಧಿ ಜಲಜಾ ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here