ಮಣಿಪಾಲ ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ 90.4 ಮೆಗಾಹರ್ಟ್ಝ್ ಸಮುದಾಯ ಬಾನುಲಿ ಕೇಂದ್ರವು ಅರ್ಪಿಸುತ್ತಿರುವ ಭಾವಯಾನ- ಸ್ವರಚಿತ ಕವನಗಳೊಂದಿಗೆ ನಮ್ಮ ಪಯಣ ಸರಣಿ ಕಾರ್ಯಕ್ರಮದ 11ನೇ ಸಂಚಿಕೆ ಎಪ್ರಿಲ್ ತಿಂಗಳ ದಿನಾಂಕ 15ರಂದು ಬುಧವಾರ ಸಂಜೆ 5.35ಕ್ಕೆ ಪ್ರಸಾರವಾಗಲಿದೆ.
ಈ ಸಂಚಿಕೆಯಲ್ಲಿ ಕವಿ ಅರುಣ ಹೆಬ್ರಿ * ಪಾಲ್ಗೊಳ್ಳಲಿದ್ದಾರೆ. *ಎಪ್ರಿಲ್ 16 ರಂದು ಗುರುವಾರ ಮಧ್ಯಾಹ್ನ 1.35ಕ್ಕೆ ಇದರ ಮರುಪ್ರಸಾರವಿರುವುದು. ರೇಡಿಯೊದಲ್ಲಿ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal ಮತ್ತು ಐಫೋನ್ ನ https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್ಲೋಡ್ ಮಾಡಿಕೊಂಡು ಈ ಕಾರ್ಯಕ್ರಮವನ್ನು ಕೇಳಬಹುದಾಗಿದೆ ಎಂದು ರೇಡಿಯೊ ಮಣಿಪಾಲ್ ನ ಪ್ರಕಟಣೆ ತಿಳಿಸಿದೆ.

