ಮಂಗಳೂರು : ಮೇ 16, 2026 ಶನಿವಾರದಂದು ಭಾವುಕ ಅಮಾವಾಸ್ಯೆ ಹಾಗು ಶನೀಶ್ವರ ಜಯಂತಿ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿಬೆಳಗ್ಗೆ 9 ಗಂಟೆಗೆ ಶನಿ ಶಾಂತಿ ಹೋಮ, ಅಭಿಷೇಕ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಸಂಜೆ 3.30ಕ್ಕೆ ಶ್ರೀ ಚಂದ್ರಶೇಖರ್ ಪೂಜಾರಿ ಮುಂಬೈ ಮತ್ತು ಬಳಗದವರಿಂದ ಶ್ರೀ ಶನೀಶ್ವರ ಕಲ್ಪೋಕ್ತ ಪೂಜೆ, ಗ್ರಂಥ ಪಾರಾಯಣ (ಯಕ್ಷಗಾನ ರೂಪದಲ್ಲಿ) ರಾತ್ರಿ 7 ಗಂಟೆಗೆ ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ನೆರವೇರಲಿದೆ. ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಧ್ಯಕ್ಷರು ಮತ್ತು ಸದಸ್ಯರು, ಅಭಿವೃದ್ಧಿ ಸಮಿತಿ, ಶ್ರೀ ಗೋಕರ್ಣನಾಥ ಕ್ಷೇತ್ರ ಜೈರಾಜ್ ಹೆಚ್. ಸೋಮಸುಂದರಂ, ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು ಶ್ರೀ ಗೋಕರ್ಣನಾಥ ಕ್ಷೇತ್ರ.

