ತುಳು ಅಕಾಡೆಮಿ ಪ್ರಕಟಿತ ಪುಸ್ತಕ ಬಿಡುಗಡೆ

0
37

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ  ಕಲಾ  ನಿರ್ದೇಶಕ ತಮ್ಮ ಲಕ್ಷ್ಮಣ ಅವರು ಬರೆದ ‘ತೆಲಿಕೆದ ರಾಜೆ ಆರ್.ಕೆ.ಉಳ್ಳಾಲ್’ ಮತ್ತು ಲೇಖಕ ವಲ್ಲಿ ಬೋಳ ಬರೆದ ‘ತುಳುವಪ್ಪೆಗ್ ಬುಲೆಕಾಣಿಕೆ’ ಪುಸ್ತಕದ ಬಿಡುಗಡೆ ಕಾರ್ಯಕ್ರಮ ತುಳು ಭವನದಲ್ಲಿ ನಡೆಯಿತು.

ಮಂಗಳೂರು ವಿಶ್ವವಿದ್ಯಾನಿಲಯದ  ಸಿಂಡಿಕೇಟ್ ಸದಸ್ಯ ಸುರೇಶ್ ಕುಮಾರ್ ಬಿ. ನಾವೂರು ಹಾಗೂ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಟ್ರಸ್ಟಿ ಕಿರಣ್ ಕುಮಾರ್ ಅವರು  ಕೃತಿಗಳನ್ನು  ಬಿಡುಗಡೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್  ವಹಿಸಿದ್ದರು. ಲೇಖಕರಾದ ತಮ್ಮ ಲಕ್ಷ್ಮಣ ಹಾಗೂ ವಲ್ಲಿ ಬೋಳ ಅವರನ್ನು ಸನ್ಮಾನಿಸಲಾಯಿತು.

ಸಾಹಿತಿ ಡಾ.ದಿವಾ ಕೊಕ್ಕಡ, ಅಕ್ಷತಾ ರಾಜ್ ಪೆರ್ಲ ಉಪಸ್ಥಿತರಿದ್ದರು.  ಅಕಾಡೆಮಿ ಸದಸ್ಯ ಪಾಂಗಾಳ ಬಾಬು ಕೊರಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.