ಅಮೃತ ಭಾರತಿ ವಿದ್ಯಾಕೇಂದ್ರದ ವಿದ್ಯಾರ್ಥಿನಿ ಭವಿಷ್ಯಾಗೆ ಗಣಿತದಲ್ಲಿ ಜಿಲ್ಲಾಮಟ್ಟದ ಪ್ರಶಸ್ತಿ

0
30

ಹೆಬ್ರಿ : ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಸಂಬಂಧಿತ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸುವ ಪಿ.ಆರ್.ಎನ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳು ಹೆಬ್ರಿ ಆಶ್ರಯದಲ್ಲಿ ನಡೆದ 18ನೇ ವರ್ಷದ ಜಿಲ್ಲಾ ಮಟ್ಟದ ವಿಜ್ಞಾನ ಮೇಳ, ಗಣಿತ, ವೇದಗಣಿತ, ಯೋಗ, ಸಂಸ್ಕೃತಿ ಜ್ಞಾನ ಮಹೋತ್ಸವ -2026 ರ ಗಣಿತ ಮಾದರಿ – ಮಾಪನ, ನಾಣ್ಯ ಮತ್ತು ಆಕೃತಿಗಳ ಗುಣ ಧರ್ಮ ಎಂಬ ವಿಷಯದ ಮೇಲೆ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪಿ.ಎನ್.ಆರ್ ಅಮೃತ ಭಾರತಿ ವಿದ್ಯಾಕೇಂದ್ರದ ವಿದ್ಯಾರ್ಥಿನಿ,ಪೆರ್ಡೂರಿನ ಸೌಮ್ಯಾರಾಣಿ ಮತ್ತು ವಿಶ್ವನಾಥ್ ಆಚಾರ್ಯರ ಮಗಳು ಕುಮಾರಿ ಭವಿಷ್ಯ ರವರು ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ ಇವರನ್ನು ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕವೃಂದದವರು ಶ್ಲಾಘಿಸಿದರು.