ಆ. 23: ಸಮೂಹ ಕಲಾ ಪ್ರದರ್ಶನ “ಸಂಗಮ” ಉದ್ಘಾಟನೆ-ಗುರುವಂದನೆ ಕಾರ್ಯಕ್ರಮ

0
118

ಉಡುಪಿ: ಚಿತ್ರಕಲಾ ಮಂದಿರ ಕಲಾಶಾಲೆಯ 2002-07ನೇ ಸಾಲಿನ ವಿದ್ಯಾರ್ಥಿಗಳ ಸಮೂಹ ಕಲಾ ಪ್ರದರ್ಶನ ಸಂಗಮ ಉದ್ಘಾಟನಾ ಸಮಾರಂಭ ಹಾಗೂ ಗುರುವಂದನೆ ಕಾರ್ಯಕ್ರಮವು ಆ. 23ರಂದು ಬೆಳಿಗ್ಗೆ 10-330 ರಿಂದ ಉಡುಪಿ ಜಂಗಮ ಮಠದ ಚಿತ್ರಕಲಾ ಮಂದಿರ ಕಲಾ ಮಂದಿರದಲ್ಲಿ ನಡೆಯಲಿದೆ.

ಮಧುರಂ ವೈಟ್‌ ಲೋಟಸ್‌ ನ ಹೊಟೇಲ್‌ ನ ಆಡಳಿತ ನಿರ್ದೇಶಕ ಅಜಯ್‌ ಪಿ. ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಸ್ಮರಣಿಕಾ ಸಂಸ್ಥಾಪಕ ದಿವಾಕರ ಸನಿಲ್‌ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಚಿತ್ರಕಲಾ ಮಂದಿರದ ಕಲಾಶಾಲೆಯ ಡಾ. ನಿರಂಜನ್‌ ಯು.ಸಿ. ಅವರು ಉಪಸ್ಥಿತಿ ಇರಲಿದ್ದಾರೆ. ದಿ. ಕೆ.ಎಲ್.‌ ಭಟ್‌ ಅವರಿಗೆ ಗುರುವಂದನೆ ನಡೆಯಲಿದೆ.

LEAVE A REPLY

Please enter your comment!
Please enter your name here