ಪುಷ್ಪ ಪ್ರಸಾದ್‍ ರವರಿಗೆ ರಾಷ್ಟ್ರಮಟ್ಟದ ದ.ರಾ.ಬೇಂದ್ರೆ ಪ್ರಶಸ್ತಿ

0
30

ಬೆಳಕು ಸಂಸ್ಥೆಯ ವತಿಯಿಂದ ಸಾಹಿತ್ಯ-ಸಾಂಸ್ಕೃತಿಕ, ಸಂಗೀತ, ಕವಿಗೋಷ್ಟಿ ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ನೀಡುವ ಅನೇಕ ಪ್ರಶಸ್ತಿಗಳಲ್ಲಿ, ಬೆಳಕು ಸಂಸ್ಥೆ ವತಿಯಿಂದ ನಡೆದ ಕವನ ರಚನೆ ಸ್ಪರ್ಧೆಯಲ್ಲಿ ಆಯ್ಕೆಯಾದ ಶ್ರೀಮತಿ ಪುಷ್ಪ ಪ್ರಸಾದ್‍ ಇವರ ನ್ಯಾಯದೇಗುಲ ಕವನಕ್ಕೆ ದ.ರಾ.ಬೇಂದ್ರೆ ರಾಷ್ಟ್ರ ಪ್ರಶಸ್ತಿಯನ್ನು ದಿನಾಂಕ 30.11.2025 ರ ರವಿವಾರದಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್‍ ಆವರಣದಲ್ಲಿರುವ ಅಕ್ಕಮಹಾದೇವಿ ಸಭಾಂಗಣದಲ್ಲಿ 121ನೇ ರಾಷ್ಟ್ರಮಟ್ಟದ ಬೆಳಕು ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿನ ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಲಾಯಿತು. ಅಲ್ಲದೇ ಈ ಕವನ ಬೆಳಕಿನ ಬುತ್ತಿ ಕೃತಿಯಲ್ಲಿ ಪ್ರಕಟಗೊಂಡಿರುತ್ತದೆ. ಇವರು ನ್ಯಾಯಾಂಗ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೆಳಕು ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಅಣ್ಣಪ್ಪ ಮೇಟಿ ಗೌಡ ಹಾಗೂ ಬೆಳಕು ಟ್ರಸ್ಟ್‍ನ ಎಲ್ಲಾ ಪಧಾದಿಕಾರಿಗಳು ಸೇರಿಕೊಂಡು ಈ ಸುಂದರ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನಡೆಸಿರುತ್ತಾರೆ.

LEAVE A REPLY

Please enter your comment!
Please enter your name here