ಇತ್ತೀಚೆಗೆ ಅಗಲಿದ ಗೋವಾದ ಹೆಸರಾಂತ ಸಾಹಿತಿ, ದಿ. ಮೀನಾ ಕಾಕೋಡಕರ ಇವರ ನೆನಪಿಗಾಗಿ ದಿ. 30-04-2025 ರಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ 1 ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಈ ಕಾರ್ಯಾಗಾರದಲ್ಲಿ ದಿ. ಮೀನಾ ಕಾಕೋಡಕರವರ ಕಥಾ ಸಾಹಿತ್ಯ ಮತ್ತು ಕಾದಂಬರಿಗಳ ಚರ್ಚಾಗೋಷ್ಟಿ ನಡೆಯಲಿದ್ದು ಗೋವಾ, ಕರ್ನಾಟಕದಿಂದ ರಾಜ್ಯದ ಹಿರಿಯ ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರು ಪ್ರಕಟಣೆಗೆ ತಿಳಿಸಿದ್ದಾರೆ.