ವರದಿ ರಾಯಿ ರಾಜ ಕುಮಾರ
ನೀಟ್, ಐಐಟಿ, ಐ ಐ ಎಸ್ ಸಿ, ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಯಶಸ್ವಿಗೊಳಿಸಿಕೊಂಡ ಹಳೆ ವಿದ್ಯಾರ್ಥಿಗಳು, ಅತ್ಯುತ್ತಮ ತರಬೇತುದಾರರೊಂದಿಗೆ ಚರ್ಚಿಸಿ ಭವಿಷ್ಯತ್ತನ್ನು ನಿರ್ಧರಿಸುವ ಅತ್ಯಪೂರ್ವ ಅವಕಾಶವನ್ನು ಮೂಡುಬಿದಿರೆಯ ಘಂಟಾಲ್ಕಟ್ಟೆಯ ಎಕ್ಸಲೆಂಟ್ ಸಂಸ್ಥೆಯು ಒದಗಿಸಿಕೊಡುತ್ತಿದೆ. ಐದರಿಂದ ಹತ್ತನೇ ತರಗತಿಯ ತನಕ ಕಲಿಯುತ್ತಿರುವ ಯಾವುದೇ ವಿದ್ಯಾರ್ಥಿ ಅಥವಾ ಆತನ ಹೆತ್ತವರು ಆಸಕ್ತರಾಗಿದ್ದಲ್ಲಿ ನೇರವಾಗಿ ಡಿಸೆಂಬರ 28 ಆದಿತ್ಯವಾರದಂದು ಬೆಳಗ್ಗೆ 10 ಗಂಟೆಗೆ ಎಕ್ಸಲೆಂಟ್ ಕ್ಯಾಂಪಸ್ ಗೆ ಆಗಮಿಸಿ ಚರ್ಚೆಯಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿ ಅಥವಾ ಮಕ್ಕಳ ಗುರಿ ಉದ್ದೇಶದ ವಿವಿಧ ಹಂತಗಳ ಬಗ್ಗೆ ತಿಳಿದುಕೊಳ್ಳುವ ಸುವರ್ಣ ಅವಕಾಶ ಲಭ್ಯವಿದೆ. ಹೆಚ್ಚಿನ ವಿವರಗಳಿಗೆ 7259573345 ಅಥವಾ 7619430144 ಸಂಪರ್ಕಿಸಬಹುದು.

