ಬೆಳ್ತಂಗಡಿ : ಹಿಂದೂ ಮಲಯಾಳಿ ಬಂಧುಗಳ ಪರವಾಗಿ ಶಾಸಕ ಹರೀಶ್‌ ಪೂಂಜರವರಿಗೆ ಅಭಿನಂದನೆ

0
10

ಬೆಳ್ತಂಗಡಿ : ಕೃಷ್ಣಾನುಗ್ರಹ ಸಭಾಭವನ ಉಜಿರೆಯಲ್ಲಿ ನಡೆದಂತಹ ವಿಷುಕಣಿ 5.0 2026 ಕಾರ್ಯಕ್ರಮ ವಿವಿಧ ಅಂತರಾಷ್ಟ್ರೀಯ ಕಲಾವಿದರನ್ನು ಒಳಗೊಂಡಂತಹ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 33 ಬಗೆಯ ಕೇರಳ ಮಾದರಿಯ ಖಾದ್ಯ ಗಳನ್ನೊಳಗೊಂಡು ಬೆಳ್ತಂಗಡಿ ತಾಲೂಕಿನ ಹಿಂದೂ ಮಲಯಾಳಿ ಬಂಧುಗಳ ಸೇರುವಿಕೆಯಲ್ಲಿ ಬಾರಿ ವಿಜೃಂಭಣೆಯಿಂದ ನಡೆಯಿತು.

ಆದ್ದರಿಂದ ಈ ಕಾರ್ಯಕ್ರಮದ ಆಯೋಜಕರಾದ ಬೆಳ್ತಂಗಡಿ ತಾಲೂಕಿನ ಜನಪ್ರಿಯ ಶಾಸಕರಾದ ಹರೀಶ್ ಪೂಂಜ ಇವರಿಗೆ ಬೆಳ್ತಂಗಡಿ ತಾಲೂಕಿನ ಹಿಂದೂ ಮಲಯಾಳಿ ಬಂಧುಗಳ ಪರವಾಗಿ ಹಾಗೂ ವಿಷುಕಣಿ ಆಚರಣ ಸಮಿತಿ ಬೆಳ್ತಂಗಡಿ ಇವರ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಅಕ್ಷರ ಅನಿಲ್ ಕುಮಾರ್, ರಮ್ಯಾ ಒನ್ ಗ್ರಾಮ್ ಗೋಲ್ಡ್ ಮಾಲಕರಾದ ಪ್ರಸಾದ್ ಬಿ ಎಸ್ ಬಾಲಕೃಷ್ಣ ನೈಮಿಶಾ,ವುಡ್ಹೌಸ್ ಮಾಲಕರಾದ ಅನಿಜಿತ್, ದಿವಿನೇಶ್ ಚಾರ್ಮಾಡಿ,ಅಖಿಲ್ ಸುರೇಶ್, ಸಚಿನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here