ಹಿರಿಯರ ಕೆಲವೊಂದು ಆಚಾರ ವಿಚಾರಗಳು ಮೂಢನಂಬಿಕೆಯಲ್ಲ ಅದೊಂದು ಮೂಲನಂಬಿಕೆ : ಜಯಾನಂದ ಚೇಳೈರು
ಸುರತ್ಕಲ್: ಹಿರಿಯರು ಮಾಡಿಕೊಂಡು ಬಂದ ಕೆಲವೊಂದು ಆಚಾರ ವಿಚಾರಗಳು ಮೂಢನಂಬಿಕೆಯಲ್ಲ ಅದೊಂದು ಮೂಲನಂಬಿಕೆ ಎಂದು ಚೇಳೈರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ ಚೇಳೈರು ಹೇಳಿದರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಬಜಪೆ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಚೇಳೈರು ವತಿಯಿಂದ ಚೇಳೈರು ಎಂ,ಅರ್,ಪಿ,ಎಲ್ ಕಾಲನಿಯ ಸಭಾಭವನದಲ್ಲಿ ನಡೆದ ಆಟಿಡೊಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕನ್ನಡ ತುಳು ಸಾಹಿತಿ ಗೀತಾ ಲಕ್ಷ್ಮೀಶ ಶೆಟ್ಟಿ ಮಾತನಾಡಿದರು,ವೇದಿಕೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಜಪೆ ಯೋಜನಾಧಿಕಾರಿ ಗಿರೀಶ್ ಎಂ,ಚೇಳೈರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ, ಮುಕ್ಕ ಚರ್ಚ್ ಸಂಘಟನಾ ಉಪಾಧ್ಯಕ್ಷೆ ಪ್ಲೇವಿ ಕುವೆಲ್ಲೊ,ಜನ ಜಾಗೃತಿ ವೇದಿಕೆ ಮುಲ್ಕಿ ವಲಯಾಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯಿರು,ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮುಲ್ಕಿ ವಲಯಾಧ್ಯಕ್ಷ ಪುಷ್ಪರಾಜ್ ಶೆಟ್ಟಿ ಮಧ್ಯ,ಮೇಲ್ವಿಚಾರಕಿ ನಿಶ್ಮಿತಾ ಸುರೇಶ್ ಶೆಟ್ಟಿ, ಚೇಳೈರು ಸೇವಾ ಪ್ರತಿನಿಧಿ ವಿದ್ಯಾ ಕಿಶೋರ್ ,ಮಧ್ಯ ಸೇವಾ ಪ್ರತಿನಿಧಿ ಯಶೋದ ಮುಂತಾದವರು ಉಪಸ್ಥಿತರಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೇಳೈರು ಒಕ್ಕೂಟದ ಅಧ್ಯಕ್ಷ ವಸಂತಕುಲಾಲ್ ವಹಿಸಿದ್ದರು ಮಣಿತಾ ಸ್ವಾಗತಿಸಿ,ಸೌಮ್ಯ ಧನ್ಯವಾದ ಸಮರ್ಪಿಸಿ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ,ಪಿ,ಯು,ಸಿ ಯಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು,ಸ್ವಸಹಾಯ ಸಂಘದ ಹಿರಿಯ ಸದಸ್ಯೆಯನ್ನು ಮತ್ತು ಸೇವಾ ಪ್ರತಿನಿಧಿ ವಿದ್ಯಾ ಅವರನ್ನು ಸನ್ಮಾನಿಸಲಾಯಿತು ಹಾಗೂ ವಿವಿಧ ಸ್ಪರ್ಧೆಯನ್ನು ಎರ್ಪಡಿಸಿ ಬಹುಮಾನ ವಿತರಿಸಲಾಯಿತು

