ಚಿಕ್ಕಮಗಳೂರು : ಎಣ್ಣೆ ವಿಚಾರಕ್ಕೆ ಗಲಾಟೆ – ಜಗಳ ತಾರಕಕ್ಕೇರಿ ಮಗನನ್ನು ಕೊಂದ ತಂದೆ

0
120

ತಂದೆಯಾದವನು ಮಗನಿಗೆ ಬುದ್ದಿ ಹೇಳಬೇಕು. ಸರಿ ದಾರಿಯತ್ತ ಸಾಗಿಸಬೇಕು. ಆದ್ರೆ ಇಲ್ಲೊಬ್ಬ ತಂದೆ ಮಗನನ್ನು ಕುಳ್ಳಿರಿಸಿಕೊಂಡು ಎಣ್ಣೆ ಪಾರ್ಟಿ ಮಾಡುತ್ತಿದ್ದ. ಕುಡಿತದ ಅಮಲೇರಿದರೆ ಕಾರಣ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಗಲಾಟೆ ತಾರಕಕ್ಕೇರಿ ಮಚ್ಚಿನಿಂದ ಕೊಚ್ಚಿ ತಂದೆಯೇ ಮಗನ ಕೊಲೆ ಮಾಡಿದ್ದಾನೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ನಡೆದಿದೆ . ಪ್ರದೀಪ್ (40) ಕೊಲೆಯಾದ ಮಗ, ರಮೇಶ್ ಆಚಾರ್ (65) ಕೊಲೆಗೈದ ತಂದೆ. ಮನೆಯಲ್ಲಿ ಅಪ್ಪ-ಮಗ ಇಬ್ಬರೇ ವಾಸವಿದ್ದು ,ಇವರಿಬ್ಬರ ಗಲಾಟೆ ತಡೆಯಲಾರದೆ ಪ್ರದೀಪ್ ತಾಯಿ ಈ ಮೊದಲೇ ಮನೆ ಬಿಟ್ಟು ಹೋಗಿದ್ದರು. ಅಡಕೆ ಮಾರಿ ಬಂದಿದ್ದು , ಸಿಕ್ಕ ಹಣದಲ್ಲಿ ರಾತ್ರಿ ಅಪ್ಪ-ಮಗ ಇಬ್ಬರೂ ಎಣ್ಣೆ ಪಾರ್ಟಿ ಮಾಡಿದ್ದಾರೆ. ಈ ವೇಳೆ ನನಗೆ ಎಣ್ಣೆ ಕಡಿಮೆ, ನಿನಗೆ ಜಾಸ್ತಿ ಅನ್ನೋ ವಿಚಾರಕ್ಕೆ ಗಲಾಟೆ ನಡೆದು ಕೊನೆಗೆ ಕೊಲೆಯಲ್ಲಿ ಅಂತ್ಯ ಕಂಡಿದೆ.

LEAVE A REPLY

Please enter your comment!
Please enter your name here