ಬಜಪೆ : ದ.ಕ. ಜಿ. ಪ. ಕಿರಿಯ ಪ್ರಾಥಮಿಕ ಶಾಲೆ ಕೊಳಂಬೆ. ಇಲ್ಲಿಯ ಮಕ್ಕಳಿಗೆ ಸರಿತಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ( ರಿ.) ಕೊಳಂಬೆ ಇವರ ವತಿಯಿಂದ ನೋಟ್ ಪುಸ್ತಕ ನಾರಾಯಣ ಪೂಜಾರಿ,ಮತ್ತು ವಿನೋಧರ ಪೂಜಾರಿ ವಕೀಲರು ವಿತರಣೆ ಮಾಡಿದರು. ಹಾಗೂ ಸರಕಾರಿ ವತಿಯಿಂದ ಸಮವಸ್ತ್ರ ವಿತರಣೆಯನ್ನು ಮಾಡಲಾಯಿತು.
ಶಾಲಾ ಮುಖ್ಯ್ಯೊ ಪಾಧ್ಯಾಯಿನಿ ಶ್ರೀಮತಿ ಮೋಲಿ ಮೇರಿನ ಲೈಸಾ ಶಾಲೆಗೆ ಸಹಕರಿಸಿದ ನಾರಾಯಣ ಪೂಜಾರಿ (ಸರಕಾರಿ ನಿವೃತ್ತರು )ಸುಂಕದಕಟ್ಟೆ, ವಿನೋಧರ್ ಪೂಜಾರಿ (ವಕೀಲರು )ಬಜ್ಪೆ, ಎಸ್. ಡಿ. ಎಮ್. ಸಿ. ಅಧ್ಯಕ್ಷೆ ಮಮತಾ,ಉಪಾಧ್ಯಕ್ಷ ಶಾಂತರಾಮ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಂತ್, ನೃತ್ಯ ಶಿಕ್ಷಕಿ ನಿರ್ಮಲಾ ಇವರನ್ನು ಸನ್ಮಾನಿಸಿದರು.
ಸಭೆಯಲ್ಲಿ ಮಕ್ಕಳು ಹಾಗೂ ಪೋಷಕರು ಹಾಜರಿದ್ದರು. ಶಾಲಾ ಸಹಶಿಕ್ಷಕಿ ವನಿತಾ ಸ್ವಾಗತಿಸಿ ವಂದಿಸಿದರು.

