ಬಿಜೆಪಿ ಕುತ್ಯಾರು ಶಕ್ತಿ ಕೇಂದ್ರದ ಸಭೆ – ‘ವಿಶ್ವಾಸ, ವಿಕಾಸ ಮತ್ತು 12 ವರ್ಷಗಳ ಜನ ಕಲ್ಯಾಣ’ ಅಭಿಯಾನದ ಪ್ರಯುಕ್ತ ಹಿರಿಯ ಕಾರ್ಯಕರ್ತರಿಗೆ ಗೌರವಾರ್ಪಣೆ

ಕಾಪು : ಎಸ್.ಐ.ಆರ್. ಪ್ರಕ್ರಿಯೆಯ ಸಂದರ್ಭದಲ್ಲಿ ಪಕ್ಷದ ಪ್ರಮುಖರು, ಎಲ್ಲಾ ಸ್ತರದ ಪದಾಧಿಕಾರಿಗಳು, ಶಕ್ತಿಕೇಂದ್ರ ಮತ್ತು ಬೂತ್ ಮಟ್ಟದ ಜವಾಬ್ದಾರಿಯುತ ಪದಾಧಿಕಾರಿಗಳು ಹಾಗೂ ಕಾರ್ಯಕರ್ತ ಬಂಧುಗಳು ಬಹಳ ಜಾಗರೂಕರಾಗಿದ್ದು ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ತಪ್ಪಿ ಹೋಗದಂತೆ ಎಚ್ಚರ ವಹಿಸಬೇಕು. ಮಾಹಿತಿಯ ಕೊರತೆ ಇದ್ದವರಿಗೆ ಅಗತ್ಯ ಮಾಹಿತಿಗಳನ್ನು ಒದಗಿಸಿ ಪ್ರತಿಯೊಬ್ಬ ಅರ್ಹ ಮತದಾರರೂ ಎಸ್.ಐ.ಆರ್. ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನಿಗಾ ವಹಿಸುವ ಜೊತೆಗೆ ಸದೃಢ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ ನೀಡಿದರು.

ಅವರು ಬಿಜೆಪಿ ಕಾಪು ಮಂಡಲ ವ್ಯಾಪ್ತಿಯ ಕುತ್ಯಾರು ಶಕ್ತಿ ಕೇಂದ್ರದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಎಸ್.ಐ.ಆರ್. ಕಾಪು ಮಂಡಲ ಉಸ್ತುವಾರಿ ಸುಲೋಚನಾ ಭಟ್ ಅವರು ಎಸ್.ಐ.ಆರ್. ಅಭಿಯಾನದ ಕುರಿತು ಸಮಗ್ರ ಮಾಹಿತಿ ನೀಡಿದರು. ಕಾಪು ಮಂಡಲಾಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ‘ವಿಶ್ವಾಸ, ವಿಕಾಸ ಮತ್ತು 12 ವರ್ಷಗಳ ಜನ ಕಲ್ಯಾಣ’ದ ಅಭಿಯಾನದ ಅಂಗವಾಗಿ ಪಕ್ಷದ ಹಿರಿಯ ಕಾರ್ಯಕರ್ತರು ಹಾಗೂ ಕಾಪು ತಾಲೂಕು ವ್ಯಾಪ್ತಿಯ ಕುತ್ಯಾರಿನ ಮೊದಲ ಬಿಜೆಪಿ ಗ್ರಾಮ ಪಂಚಾಯತ್ ಸದಸ್ಯರಾದ ಲೀಲಾ ಭಂಡಾರಿ ಮತ್ತು ಭಾಸ್ಕರ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಕುತ್ಯಾರು ಶಕ್ತಿ ಕೇಂದ್ರದ ನೂತನ ಅಧ್ಯಕ್ಷ ಶುಶಾಂತ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಾಪು ಮಂಡಲ ಉಪಾಧ್ಯಕ್ಷೆ ಲತಾ ಆಚಾರ್ಯ, ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ ರಾವ್ ಮಟ್ಟು, ಪ್ರಮುಖರಾದ ಸಂದೀಪ್ ರಾವ್ ಮಜೂರು, ಪ್ರವೀಣ್ ಗುರ್ಮೆ, ಶಿರ್ವ ಸಿ.ಎ. ಬ್ಯಾಂಕ್ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ, ಬೂತ್ ಅಧ್ಯಕ್ಷ ಪ್ರಭಾಕರ ಶೆಟ್ಟಿ, ದೀರಜ್ ಕುಲಾಲ್, ದೇವರಾಜು ಬಿ., ಕುತ್ಯಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಅಗ್ನೇಸ್ ಮಾತಾಯಸ್, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ಧನ ಆಚಾರ್ಯ, ಧೀರಜ್ ಶೆಟ್ಟಿ, ಬಿ.ಎಲ್.ಒ-2 ಗಳಾದ ಗಣೇಶ್ ಶೆಟ್ಟಿ ಪಯ್ಯರ್, ಅಶೋಕ್ ನಾಯ್ಕ್, ಸಂಪತ್ ಪೂಜಾರಿ ಮಾಜಿ ಪಂಚಾಯತ್ ಸದಸ್ಯ ಎವಾಜಿನ್ ತಾವರೋ ಮುಂತಾದವರು ಉಪಸ್ಥಿತರಿದ್ದರು.

