Wednesday, April 23, 2025
HomeUncategorizedಕಾಸರಗೋಡು ಕನ್ನಡ ನಾಟಕೋತ್ಸವದಲ್ಲಿ ನಾಲ್ಕು ಕನ್ನಡ ನಾಟಕಗಳ ಪ್ರದರ್ಶನ

ಕಾಸರಗೋಡು ಕನ್ನಡ ನಾಟಕೋತ್ಸವದಲ್ಲಿ ನಾಲ್ಕು ಕನ್ನಡ ನಾಟಕಗಳ ಪ್ರದರ್ಶನ

ಕಾಸರಗೋಡು ಕನ್ನಡ ಗ್ರಾಮದಲ್ಲಿ ವಿ.ಕೆ.ಎಂ ಕಲಾವಿದರು (ರಿ )ಬೆಂಗಳೂರು ನೇತೃತ್ವದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ ಕಾಸರಗೋಡು ಸಹಯೋಗದಲ್ಲಿ ಕರ್ನಾಟಕ ಗಡಿನಾಡ ಉತ್ಸವ ಹಾಗೂ ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಕಾಸರಗೋಡು ಕನ್ನಡ ನಾಟಕೋತ್ಸವದಲ್ಲಿ ನಾಲ್ಕು ಕನ್ನಡ ನಾಟಕಗಳ ಪ್ರದರ್ಶನ
ಕರ್ನಾಟಕ ರಾಜ್ಯದ ಹಿರಿಯ ರಂಗಭೂಮಿ ಮತ್ತು ಸಾಂಸ್ಕೃತಿಕ ಸಂಘಟನೆಯಾದ ವಿ. ಕೆ. ಎಂ ಕಲಾವಿದರು (ರಿ ), ಬೆಂಗಳೂರು ಇದರ 44ನೇ ಸಂಸ್ಥಾಪನಾ ವರ್ಷಾಚರಣೆಯ ಅಂಗವಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು ಇದರ ಪ್ರಾಯೋಜಕತ್ವದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ, ಕಾಸರಗೋಡು ಇದರ ಸಹಯೋಗದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ಮಾರ್ಚ್ 27ರಂದು ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಹಳೆ ನಾಟಕಗಳ ಸವಿನೆನಪು,ಕಾಸರಗೋಡು ಕನ್ನಡ ನಾಟಕೋತ್ಸವದಲ್ಲಿ ನಾಲ್ಕು ಕನ್ನಡ ನಾಟಕಗಳ ಪ್ರದರ್ಶನ ಮತ್ತು ಕರ್ನಾಟಕ ಗಡಿನಾಡ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿ. ಕೆ. ಎಂ.ಕಲಾವಿದರು (ರಿ), ಬೆಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಸಿ. ಎಂ. ತಿಮ್ಮಯ್ಯ ಬೆಂಗಳೂರು ಇವರ ಸಾರಥ್ಯದಲ್ಲಿ ಈ ನಾಲ್ಕು ಕನ್ನಡ ನಾಟಕಗಳು ಗಡಿನಾಡಿನ ಕಾಸರಗೋಡು ಕನ್ನಡ ಗ್ರಾಮದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿರುತ್ತದೆ.
1) ರೂಪ ಕಲಾನಿಕೇತನ, ಬೆಂಗಳೂರು ಅಭಿನಯಿಸುವ ಎನ್.ಎಸ್.ರಾವ್
ವಿರಚಿತ:- “ವರ ಭ್ರಷ್ಟ” ಕನ್ನಡ ನಾಟಕ
ನಿರ್ದೇಶನ:-ಡಿ. ವೆಂಕಟರಮಣಯ್ಯ (ಅಪ್ಪಾಜಿ),ಬೆಂಗಳೂರು
2) ರಂಗಸೇತುವೆ ಟ್ರಸ್ಟ್, ಬೆಂಗಳೂರು ಅಭಿನಯಿಸುವ,
ರಚನೆ:-ಡಾ II ಪ್ರಭು ಶಂಕರ ಅವರ “ಅಂಗುಲೀಮಾಲಾ” ಕನ್ನಡ ನಾಟಕ
ನಿರ್ದೇಶನ ಮತ್ತು ಸಂಗೀತ:- ಐ. ಟಿ.ಐ.ಆರ್. ರಾಮಮೂರ್ತಿ ,ಬೆಂಗಳೂರು
3) ವಿ. ಕೆ. ಎಂ. ಕಲಾವಿದರು(ರಿ ),ಬೆಂಗಳೂರು ಅಭಿನಯಿಸುವ ಎನ್. ಎಸ್ . ರಾವ್ ಅವರ “ರಣದುಂದುಭಿ” ಕನ್ನಡ ನಾಟಕ
ನಿರ್ದೇಶನ: ಡಿ. ವೆಂಕಟರಮಣಯ್ಯ ,ಸಿ.ಎಂ. ತಿಮ್ಮಯ್ಯ ಬೆಂಗಳೂರು
4) ರಂಗ ಪರಿಸರ, ಧಾರವಾಡ ಅಭಿನಯಿಸುವ ಎಂ.ಎನ್. ಕಲಬುರ್ಗಿ ಅವರ” ಖರೇ ಖರೇ ಸಂಗ್ಯಾ ಬಾಳ್ಯ “- ಕನ್ನಡ ನಾಟಕ
ನಿರ್ದೇಶನ:- ವಿಠಲ್ ಕೊಪ್ಪದ್ , ಧಾರವಾಡ
5) ಕೆ. ಲಕ್ಷ್ಮಣ ಸುವರ್ಣ ಬೆಂಗಳೂರು ಅವರಿಂದ ಸುಗಮ ಸಂಗೀತ ಗಾಯನ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಿತು. ವಿಶ್ವರಂಗಭೂಮಿ ದಿನಾಚರಣೆಯ ಅಂಗವಾಗಿ ಕನ್ನಡ ಮತ್ತು ಸoಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು ಈ ನಾಲ್ಕು ಕನ್ನಡ ನಾಟಕಗಳನ್ನು ಪ್ರಾಯೋಜಿಸಿರುತ್ತದೆ . ಕಾಸರಗೋಡು ಕನ್ನಡ ಗ್ರಾಮದಲ್ಲಿ ವರ್ಷಂಪ್ರತಿ
ಮಾರ್ಚ್ 27 ರಂದು ಕಾಸರಗೋಡು ಕನ್ನಡ ನಾಟಕೋತ್ಸವದಲ್ಲಿ ಪ್ರಸಿದ್ಧ ಕನ್ನಡ ನಾಟಕಗಳ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ.
ವಿ.ಕೆ.ಎಂ.ಕಲಾವಿದರು (ರಿ ) ಬೆಂಗಳೂರು ಇದರ ಸಂಸ್ಥಾಪಕರಾದ ಸಿ. ಎಂ. ತಿಮ್ಮಯ್ಯ ಅವರು ಗಡಿನಾಡು, ಹೊರನಾಡು ಮತ್ತು ವಿವಿಧ ರಾಜ್ಯಗಳಲ್ಲಿ ವರ್ಷಂಪ್ರತಿ ಕನ್ನಡ ನಾಟಕಗಳ ಪ್ರದರ್ಶನ ಮತ್ತು ಸಾಂಸ್ಕೃತಿಕ ಉತ್ಸವಗಳನ್ನು ಸಂಘಟಿಸಿ ಕರ್ನಾಟಕ ರಾಜ್ಯದಿಂದ ವಿವಿಧ ನಾಟಕ ಮತ್ತು ಸಾಂಸ್ಕೃತಿಕ ಸಂಘ ಸಂಸ್ಥೆಗಳ ಕಾರ್ಯಕ್ರಮಗಳನ್ನು ತಮ್ಮ ನೇತೃತ್ವದಲ್ಲಿ ಸಾಂಸ್ಕೃತಿಕ ನಿಯೋಗದೊಂದಿಗೆ ಕೊಂಡೊಯ್ಯುತ್ತಿದ್ದಾರೆ.ಸಿ. ಎಂ. ತಿಮ್ಮಯ್ಯ ಅವರಿಗೆ 2025 ರ ಅವಧಿಯ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲ್ಪಡಲು ಈಗಾಗಲೇ ವಿವಿಧ ಸಂಘ-ಸಂಸ್ಥೆಗಳು ಶಿಫಾರಸ್ಸು ಮಾಡುತ್ತಿದ್ದಾರೆ. ಸಿ. ಎಂ. ತಿಮ್ಮಯ್ಯ ಬೆಂಗಳೂರು ಅವರಿಗೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ “ಪ್ರತಿಷ್ಠಿತ ಜೀವಮಾನ ಸಾಧನಾ ಪ್ರಶಸ್ತಿ – 2025” ನೀಡಿ ಗೌರವಿಸಲಾಯಿತು.
ವಿಶ್ವರಂಗಭೂಮಿ ದಿನಾಚರಣೆಯ ಅಂಗವಾಗಿ ಕಾಸರಗೋಡು ಕನ್ನಡ ನಾಟಕೋತ್ಸವದಲ್ಲಿ ನಾಲ್ಕು ಕನ್ನಡ ನಾಟಕಗಳ ಪ್ರದರ್ಶನ ಮತ್ತು ಕರ್ನಾಟಕ ಗಡಿನಾಡ ಉತ್ಸವದಲ್ಲಿ ಗಾಯಕ, ಗಾಯಕಿಯರಿಂದ ಏಕಕಂಠಗಾಯನ, ಗಾಯಕ ಗಾಯಕಿಯರಿಂದ ಸಮೂಹ ಕನ್ನಡ ನಾಡಗೀತಾ ಗಾಯನ,ರೈತ ಗೀತಾ ಗಾಯನ, ಕನ್ನಡ ಚಿತ್ರ ಗೀತಾ ಗಾಯನವನ್ನು ಏರ್ಪಡಿಸಲಾಯಿತು. ಕಾಸರಗೋಡು ಕೇರಳ ಮತ್ತು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಯ ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕರು, ಮಾಧ್ಯಮದವರು ,ಗಾಯಕರು ಏಕಕಂಠ ಗಾಯನದಲ್ಲಿ ಭಾಗವಹಿಸಿದ್ದಾರೆ.
ವಿಶ್ವ ರಂಗಭೂಮಿ ಪ್ರಶಸ್ತಿ ಪ್ರದಾನ:-
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ ),ಕನ್ನಡ ಗ್ರಾಮ ಕಾಸರಗೋಡು ಇದರ 35ನೇ ಸಂಸ್ಥಾಪನಾ ವರ್ಷಾಚರಣೆ ಹಾಗೂ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ರಜತ ಮಹೋತ್ಸವ ಮತ್ತು ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರತಿಷ್ಠಿತ ವಿಶ್ವ ರಂಗಭೂಮಿ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯದ ರಂಗ ಸಾಧಕರಾದ ಡಿ. ವೆಂಕಟರಮಣಯ್ಯ (ಅಪ್ಪಾಜಿ), ಕೆ .ಲಕ್ಷ್ಮಣ ಸುವರ್ಣ, ಕಲ್ಯಾಣಿ ಪ್ರದೀಪ್ ಬೆಂಗಳೂರು ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ಬಳ್ಳಾರಿ,ಅವರಿಗೆ ನೀಡಿ ಗೌರವಿಸಲಾಯಿತು.
ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ವಿಶ್ವ ರಂಗಭೂಮಿ ಪ್ರಶಸ್ತಿಯು ಪ್ರಶಸ್ತಿ ಫಲಕ ,ಪ್ರಶಸ್ತಿ ಪತ್ರ, ಸ್ಮರಣೆಕೆ ,ರೇಷ್ಮೆ ಶಾಲು, ಹಾರ ಮತ್ತು ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವರ ಭಾವಚಿತ್ರವನ್ನು ನೀಡಿ ಗುರುಹಿರಿಯರ ಸಮ್ಮುಖದಲ್ಲಿ ಸಂಪ್ರದಾಯದಂತೆ ಅಭಿನಂದಿಸಲಾಯಿತು.
ನಿರ್ಣಯಗಳು:-
ಕಾಸರಗೋಡು ಕನ್ನಡ ಗ್ರಾಮದಲ್ಲಿ ವಿಶ್ವರಂಗಭೂಮಿ ದಿನಾಚರಣೆಯ ಅಂಗವಾಗಿ ವರ್ಷಂಪ್ರತಿ ಮಾರ್ಚ್ 27ರಂದು ಕರ್ನಾಟಕ ಗಡಿನಾಡ ಉತ್ಸವ – ಹಾಗೂ ವಿಶ್ವರಂಗಭೂಮಿ ದಿನಾಚರಣೆಯ ಅಂಗವಾಗಿ ಕಾಸರಗೋಡು ಕನ್ನಡ ನಾಟಕೋತ್ಸವವನ್ನು ಆಯೋಜಿಸಲು ತೀರ್ಮಾನಿಸಲಾಯಿತು.2025 ರಲ್ಲಿ ನಾಲ್ಕು ಕನ್ನಡ ನಾಟಕಗಳನ್ನು ಪ್ರಾಯೋಜಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು ಇದರ ನಿರ್ದೇಶಕರಿಗೆ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.

RELATED ARTICLES
- Advertisment -
Google search engine

Most Popular