ಐಪಿಎಲ್ ಮಾದರಿಯಲ್ಲಿ ಕಂಬಳಕ್ಕೂ ಪ್ರಾಯೋಜಕತ್ವ ಸಿಗಲಿ : ಬೆಳಪು ದೇವಿಪ್ರಸಾದ್ ಶೆಟ್ಟಿ

0
27

ಮೂಡುಬಿದಿರೆ : ಜಿಲ್ಲೆಯ ಎಲ್ಲ ಕಂಬಳಗಳಿಗೆ ಐಪಿಎಲ್ ಮಾದರಿಯಲ್ಲಿ ಪ್ರಾಯೋಜಕತ್ವ ದೊರಕುವಂತಾಗಬೇಕು ಎಂದು ಜಿಲ್ಲಾ ಕಂಬಳ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಹಾಗೂ ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಅಭಿಪ್ರಾಯಪಟ್ಟರು.

ಮೂಡುಬಿದಿರೆಯಲ್ಲಿ ನಡೆದ ಜಿಲ್ಲಾ ಕಂಬಳ ಸಮಿತಿಯ ಮಹಾಸಭೆಯಲ್ಲಿ ಮಾತನಾಡಿದ ಅವರು, ಕಂಬಳ ಆಯೋಜನೆಗೆ ಹೆಚ್ಚಿನ ಆರ್ಥಿಕ ಬಲದ ಅಗತ್ಯವಿದ್ದು, ಕಾರ್ಪೊರೇಟ್ ಸಂಸ್ಥೆಗಳು ಹಾಗೂ ವಿವಿಧ ವಲಯಗಳ ಪ್ರಾಯೋಜಕರನ್ನು ಸೆಳೆಯುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನಗಳು ನಡೆಯಬೇಕೆಂದು ಹೇಳಿದರು.

ಐಪಿಎಲ್ ಮಾದರಿಯ ಪ್ರಾಯೋಜಕತ್ವ ವ್ಯವಸ್ಥೆ ಜಾರಿಯಾದರೆ ಜಿಲ್ಲೆಯ ಎಲ್ಲಾ ಕಂಬಳಗಳಿಗೆ ಸಮರ್ಪಕ ಆರ್ಥಿಕ ನೆರವು ಲಭಿಸಲಿದೆ. ಇದರಿಂದ ಕಂಬಳ ಆಯೋಜನೆಯ ಗುಣಮಟ್ಟ ಹೆಚ್ಚುವುದರ ಜೊತೆಗೆ, ಕರಾವಳಿಯ ಈ ಐತಿಹಾಸಿಕ ಜನಪದ ಕ್ರೀಡೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಉಳಿಸಿ ಬೆಳೆಸಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.

ಕಂಬಳದ ಅಭಿವೃದ್ಧಿ ಮತ್ತು ವಿಸ್ತರಣೆಗೆ ಸಮಿತಿಗಳು, ಆಯೋಜಕರು, ಕ್ರೀಡಾಭಿಮಾನಿಗಳು ಹಾಗೂ ಸಮಾಜದ ವಿವಿಧ ವಲಯಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕೆಂದು ಬೆಳಪು ದೇವಿಪ್ರಸಾದ್ ಶೆಟ್ಟಿ ಕರೆ ನೀಡಿದರು.

ಮಹಾಸಭೆಯಲ್ಲಿ ಕಂಬಳ ಆಯೋಜನೆ, ಆರ್ಥಿಕ ನಿರ್ವಹಣೆ, ಕ್ರೀಡೆಯ ಉತ್ತೇಜನ ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು.

LEAVE A REPLY

Please enter your comment!
Please enter your name here