ಕಿನ್ನಿಗೋಳಿ: ವಿದ್ಯೆ ಕಲಿತು ಸಾಧಕರಾಗಿ ಕಲಿತ ಶಾಲೆಯನ್ನು ಮರೆಯಬೇಡಿ: ಪೃಥ್ವಿರಾಜ ಆಚಾರ್ಯ

0
52

ಮುಲ್ಕಿ: ಸರಕಾರಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ವಿದ್ಯೆ ಕಲಿತು ಸಾಧಕರಾಗಿ ಕಲಿತ ಶಾಲೆಯನ್ನು ಮರೆಯಬೇಡಿ ಎಂದು ಉದ್ಯಮಿ ಪೃಥ್ವಿರಾಜ ಆಚಾರ್ಯ ಹೇಳಿದರು.
ಅವರು ಕಿನ್ನಿಗೋಳಿ ಸಮೀಪದ ಪದ್ಮನೂರು ದ.ಕ. ಜಿಲ್ಲಾ ಪಂಚಾಯತ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಶಾಲಾ ಬ್ಯಾಗ್, ಪೌಚ್ ಹಾಗೂ ಅಕ್ಷರ ದಾಸೋಹ ಮಧ್ಯಾಹ್ನದ ಬಿಸಿಯೂಟವನ್ನು ಬಡಿಸಲು ಸ್ಟೀಲ್ ಪಾತ್ರೆಗಳು ಸೇರಿ ರೂ 30,000 ಮೌಲ್ಯದ ವಸ್ತುಗಳನ್ನು ಶಾಲೆಗೆ ಹತ್ತಾಂತರಿಸಿ ಮಾತನಾಡಿದರು. ಈ ಸಂದರ್ಭ ಶಾಲೆಯ ಶಿಕ್ಷಕ ವೃಂದ ಹಾಗೂ ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here