ಮನೆಗೊಂದು ತುಳು ಪುಸ್ತಕ ಇರಲಿ : ಬೆನೆಟ್ ಜಿ ಅಮ್ಮನ್ನ

0
4

ಮಂಗಳೂರು : ಪ್ರತಿಯೊಬ್ಬ ತುಳುವರ ಮನೆಯಲ್ಲಿ ತುಳು ಪುಸ್ತಕ ಓದುವಂತಾಗಬೇಕು , ಪ್ರತಿಯೊಬ್ಬ ತುಳುವರು ತಮ್ಮ ಮನೆಗೊಂದು ತುಳು ಪುಸ್ತಕವನ್ನು ಖರೀದಿಸಿ, ತುಳು ಸಾಹಿತ್ಯದ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕೆಂದು ಎಂದು ಹಿರಿಯ ಸಂಶೋಧಕ ಹಾಗೂ ತುಳು ಅಕಾಡೆಮಿ ಮಾಜಿ ಸದಸ್ಯ ಬೆನೆಟ್ ಜಿ ಅಮ್ಮನ್ನ ಅವರು ಹೇಳಿದರು.
ತುಳು ಸಾಹಿತ್ಯ ಅಕಾಡೆಮಿ ಹಾಗೂ ಉಜಿರೆ ಶ್ರೀ ರ‍್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಹಯೋಗದಲ್ಲಿ ನಡೆದ ‘ಅಕಾಡೆಮಿಡ್ ಒಂಜಿ ದಿನ ಬಲೆ ತುಳು ಓದುಗ’ ಸರಣಿಯ 16ನೇ ಕರ‍್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ಟಿ ಶೆಟ್ಟಿ ಅವರು ಮಾತನಾಡಿ, ಯುವ ಜನತೆಗೆ ತುಳು ಭಾಷೆಯ ಮೇಲೆ, ತುಳು ಸಾಹಿತ್ಯದ ಮೇಲೆ ಅಭಿಮಾನ ಮತ್ತು ಪ್ರೀತಿ ಮೂಡಿಸುವ ಬಲೆ ತುಳು ಓದುಗ ಕಾರ‍್ಯಕ್ರಮ ಅಭಿನಂದನರ‍್ಹ ಎಂದು ಹೇಳಿದರು.

ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರ‍್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ಓದುವ ಸಲುವಾಗಿ ನಡೆಯುವ ಈ ವಿಶಿಷ್ಟ ಕರ‍್ಯಕ್ರಮದಲ್ಲಿ ವಿದ್ಯರ‍್ಥಿಗಳು ಸಂಭ್ರಮದಿಂದ ಭಾಗವಹಿಸುತ್ತಾರೆ ಹಾಗೂ ಆಸಕ್ತಿಯಿಂದ ಓದುತ್ತಾರೆ ಎಂದರು. ಎಸ್ ಡಿ ಎಂ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಹಾಗೂ ಅಕಾಡೆಮಿ ಮಾಜಿ ಸದಸ್ಯ ಡಾ. ದಿವಾ ಕೊಕ್ಕಡ ಮತ್ತು ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ರವಿಶಂಕರ ಜಿ.ಕೆ ಶುಭ ಕೋರಿ ಮಾತನಾಡಿದರು

ವಿದ್ಯಾರ‍್ಥಿ ಸಂಚಾಲಕರಾದ ಸುಹಾ ಫಾತಿಮಾ, ಅಕಾಡೆಮಿಯ ಸದಸ್ಯರಾದ ಕುಂಬ್ರ ದರ‍್ಗಾಪ್ರಸಾದ್ ರೈ, ಬೂಬ ಪೂಜಾರಿ ಮಳಲಿ, ಅಕ್ಷಯ ಆರ್ ಶೆಟ್ಟಿ ಉಪಸ್ಥಿತರಿದ್ದರು. ಸಂಜೆಯ ಸಮಾರೋಪದಲ್ಲಿ ವಿದ್ಯರ‍್ಥಿಗಳು ತಾವು ಓದಿದ ಪುಸ್ತಕದ ಬಗ್ಗೆ ವಿಚಾರ ವಿನಿಮಯ ನಡೆಸಿದರು. ಅಕಾಡೆಮಿ ಸದಸ್ಯ ಸಂಚಾಲಕ ಸಂತೋಷ್ ಶೆಟ್ಟಿ ಹಿರಿಯಡ್ಕ ಕರ‍್ಯಕ್ರಮ ನಿರೂಪಿಸಿದರು. ಅಕಾಡೆಮಿಯ ರಿಜಿಸ್ಟ್ರಾರ್ ಪರ‍್ಣಿಮಾ ವಂದಿಸಿದರು.