Tuesday, May 13, 2025
HomeUncategorizedಮಂಜಣ್ಣ ಸೇವಾ ಬ್ರಿಗೇಡ್ ವತಿಯಿಂದ ಅಶಕ್ತರಿಗೆ ಮನೆ ನಿರ್ಮಾಣ

ಮಂಜಣ್ಣ ಸೇವಾ ಬ್ರಿಗೇಡ್ ವತಿಯಿಂದ ಅಶಕ್ತರಿಗೆ ಮನೆ ನಿರ್ಮಾಣ

ಮಂಜುನಾಥ್( ಮಂಜಣ್ಣ) ರವರ ಸ್ಮರಣಾರ್ಥ ಹುಟ್ಟಿಕೊಂಡ ಸಂಸ್ಥೆಯೇ ಮಂಜಣ್ಣ ಸೇವಾ ಬ್ರಿಗೇಡ್. ಸದಾ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಹೆಮ್ಮೆಯ ಸಂಸ್ಥೆಯಾಗಿದೆ. ಕರಾವಳಿಯ ಸೇವಾ ಮುಕುಟದಂತೆ ಫಳಿಸುತ್ತಿರುವ ಮಂಜಣ್ಣ ಸೇವಾ ಬ್ರಿಗೇಡ್ ಸಂಸ್ಥೆಯ ಕಾರ್ಯವೈಖರಿ ನಿಜಕ್ಕೂ ಶ್ಲಾಘನಾರ್ಹ. ಸಮಾನ ಮನಸ್ಕರು ಮಂಜಣ್ಣ ಅವರ ವ್ಯಕ್ತಿತ್ವ ಧ್ರುವತಾರೆಯಂತೆ ಹೊಳೆಯಬೇಕೆಂಬ ಮಹತ್ವಾಕಾಂಕ್ಷೆಯಿಂದ ಹುಟ್ಟು ಹಾಕಿದ ಸಂಸ್ಥೆ ಇಂದು ಬೆಳೆದು ಹೆಮ್ಮರವಾಗಿ ನಿಂತಿದೆ. ಗೆಳೆಯರ ಬಳಗ ಸುರತ್ಕಲ್ ಎಂಬ ಹಿಂದೂ ತರುಣರ ಪಡೆ ಮಂಜುನಾಥ್ ಅವರ ಸವಿನೆನಪಿಗಾಗಿ ಮಂಜಣ್ಣ ಸೇವಾ ಬ್ರಿಗೇಡ್ ಎಂಬ ಸಂಘಟನೆಯನ್ನು ಕಲೆಹಾಕಿ, ಅಶಕ್ತರ ಪಾಲಿಗೆ ನೆರವಾಗುತ್ತಿದೆ.


ಸುನೀತಾ ಪೂಜಾರಿ ಯವರಿಗೆ ಮನೆ ನಿರ್ಮಾಣ
ಪಡೀಲ್ ನ ಬಟ್ಟ್ರ ಬೆಟ್ಟು ವಿನಲ್ಲಿ ಸುನೀತಾ ಪೂಜಾರಿ ಮತ್ತು ಅವರ ಅಣ್ಣ ಮಾನಸಿಕ ತೊಂದರೆಯಲ್ಲಿ ಬಳಲುತ್ತಿದ್ದು ಅವರ ಜೀವನ ನಡೆಸುವುದೇ ಕಷ್ಟವನ್ನೂ ಅರಿತು ಸ್ಥಳೀಯರಾದ ಮನೋಜ್ ಮತ್ತು ಶರಣ್ ನವರ ನಮ್ಮ ಸಂಸ್ಥೆಗೆ ತಿಳಿಸಿದ್ದು ಅವರಿಗೆ ಕುಳಿತು ಕೊಳ್ಳಲು ಸೂಕ್ತವಾದ ಮನೆಯ ನಿರ್ಮಾಣ ಮಾಡಿಕೊಡಲಾಗಿದೆ.

ಮಂಜುನಾಥ್ ನಿಧನದ ನಂತರ ಗೆಳೆಯರ ಬಳಗ ಸುರತ್ಕಲ್ ಅನ್ನುವ ಸಂಘಟನೆಯನ್ನು ಕಲೆಹಾಕಿ ದಸರಾ ಸಮಯದಲ್ಲಿ ಹುಲಿವೇಷ ಹಾಕಿ ಅದರಲ್ಲಿ ಉಳಿಕೆಯಾದ ಮೊತ್ತವನ್ನು ಸಮಾಜಸೇವೆಗೆ ಮುಡಿಪಾಗಿರಿಸಲಾಯಿತು. ಅಲ್ಲಿಂದ ಗಜಹೆಜ್ಜೆಯನ್ನಿಟ್ಟು ಬಂದು 15 ವರ್ಷಗಳನ್ನು ಪೂರೈಸಿದೆ ಗೆಳೆಯರ ಬಳಗ ಸುರತ್ಕಲ್. ನಂತರ 2017ರಲ್ಲಿ ಅವರ ಹೆಸರಿನಲ್ಲೇ, ಮಂಜಣ್ಣ ಸೇವಾ ಬ್ರಿಗೇಡ್ ಸಂಸ್ಥೆ ಪ್ರಾರಂಭಿಸಲಾಯಿತು. ಸಂಸ್ಥೆ ಪ್ರಾರಂಭವಾದ ಮೊದಲ ಹೆಜ್ಜೆಯೇ ಮಂಜುನಾಥ್ ರವರ ತಾಯಿಯವರ ಮುಖಾಂತರ ಬಂಟ್ವಾಳದ ಸಂಘದ ಕಾರ್ಯಕರ್ತ ಶರತ್ ಮಡಿವಾಳರವರ ಮನೆಗೆ ಮನೆಗೆ ಧನಸಹಾಯ ಮಾಡುವ ಮೂಲಕ ಅಶಕ್ತ ಕುಟುಂಬದ ಕಷ್ಟಕ್ಕೆ ಸ್ಪಂದಿಸಲು ಮುಂದಾದ ಸಂಸ್ಥೆ ಸತತ 7 ವರ್ಷಗಳಿಂದ ಅಶಕ್ತರ ಕಂಬನಿ ಒರೆಸುವ ಕಾರ್ಯದಲ್ಲಿ ತೊಡಗಿದೆ. ಕೊರೋನ ಸಮಯದಲ್ಲಿ ಅದೆಷ್ಟೋ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ರಕ್ತದಾನ, ಶ್ರಮದಾನ ಎಲ್ಲಾ ಸೇವಾ ಕ್ಷೇತ್ರದಲ್ಲೂ ಈ ತಂಡ ಸದಾ ಸಿದ್ಧ.

ಪ್ರತಿ ವರ್ಷ ಲೋಕ ಕಲ್ಯಾಣಾರ್ಥವಾಗಿ ಪರಮ ಪಾದದಿಂದ ಮೂಲ ಪಾದದೆಡೆಗೆ ಎಂಬ ಹೆಸರಿನಲ್ಲಿ ಶ್ರಿ ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಶ್ರಿ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ಭಕ್ತಿ ಧರ್ಮದ ನಡೆ ಬೃಹತ್ ಪಾದಯಾತ್ರೆಯು ನಡೆಯುತ್ತಿದೆ.

ಬಡ ಕುಟುಂಬಗಳ ಕಣ್ಣೀರನ್ನು ಹೊರೆಸುವ ಕಾರ್ಯಕ್ಕೆ ಪಣ ತೊಟ್ಟ ಮಂಜಣ್ಣ ಸೇವಾ ಬ್ರಿಗೇಡ್ ಸಂಸ್ಥೆ ಸುಮಾರು 200 ಬಡ ಕುಟಂಬಗಳಿಗೆ 60 ರಿಂದ 65 ಲಕ್ಷಕೂ ಅಧಿಕ ಸಹಾಯ ದಾನವನ್ನು ಸೇವಾ ಯೋಜನೆಯ ರೂಪದಲ್ಲಿ ಹಸ್ತಾಂತರಿಸಿದ್ದಾರೆ. ಸರಿಸುಮಾರು 100ಕ್ಕೂ ಅಧಿಕ ಕುಟುಂಬದ ಸದಸ್ಯರಿಗೆ ವೈದಕೀಯ ಚಿಕಿತ್ಸೆ, 40ಕ್ಕೂ ಅಧಿಕ ಕುಟುಂಬಗಳಿಗೆ ವಿದ್ಯಾಭ್ಯಾಸದ ನೆರವು ಹಾಗೂ 40ಕ್ಕೂ ಮಿಕ್ಕಿ ಕುಟುಂಬಗಳಿಗೆ ಮದುವೆಯ ನೆರವಿಗಾಗಿ ಹಾಗೂ ಇನ್ನೂ ಅನೇಕ ರೀತಿಯಲ್ಲಿ ಈ ಸಂಸ್ಥೆ 60 ಲಕ್ಷಕ್ಕೂ ಅಧಿಕ ಸಹಾಯ ಹಸ್ತ ಚಾಚಿದ್ದಾರೆ.

ಹಿಂದುತ್ವಕ್ಕಾಗಿ ಬಲಿದಾನ ಮಾಡಿದವರ ಹೆಸರಿನಲ್ಲಿ ನಡೆಯುವುದು ಬಹಳ ವಿರಳ. ಈ ಸಂಘಟನೆಯ ಕಾರ್ಯಕರ್ತರು ಇಷ್ಟೂ ವರ್ಷ ತುಂಬಾ ವ್ಯವಸ್ಥಿತವಾಗಿ ಮುಂದುವರೆಸಿಕೊಂಡು ಬಂದಿದ್ದಾರೆ. ಇದರಲ್ಲಿ ಯಾವುದೇ ಬೇಧ ಭಾವವಿಲ್ಲದೆ ಹಿಂದೂ ಕುಟುಂಬಗಳ ಕಂಬನಿ ಒರೆಸಲು ಸದಾ ಸಿದ್ಧವಿರುವ ಸಂಸ್ಥೆಯಿದು. ಈ ಸಂಸ್ಥೆಯು ಇನ್ನಷ್ಷೋ ಬೆಳೆದು ಸಮಾಜಕ್ಕೆ ಮಾದರಿಯಾಗಲಿ.

RELATED ARTICLES
- Advertisment -
Google search engine

Most Popular