ಶ್ರೀಕೃಷ್ಣ ಮಠಕ್ಕೆ,ಸಾರ್ವಜನಿಕ ಉದ್ದಿಮೆಗಳ ಸಮಿತಿ (ಕೆ ಯು ಐ ಡಿ ಎಫ್ ಸಿ) ವತಿಯಿಂದ ಅನುಷ್ಠಾನ ಗೊಳ್ಳುತ್ತಿರುವ ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿಗಳ ಪರಿಶೀಲನೆಗೆ ಆಗಮಿಸಿದ ಶಾಸಕರ ನಿಯೋಗದ ಅಧ್ಯಕ್ಷರು ಪಿ ರಘುಮೂರ್ತಿ ಹಾಗೂ ಸದಸ್ಯ ಶಾಸಕರಾದ ಜಿಕೆ ವೆಂಕಟೇಶ್ ರೆಡ್ಡಿ,ಕೃಷ್ಣಪ್ಪ, ಶಂಕರಗೌಡ, ಎಸ್ ಮುನಿರಾಜು, ಟಿಎನ್ ಜವರಾಯ, ಕಿಶೋರ್ ಕುಮಾರ್ ಪುತ್ತೂರು ಹಾಗೂ ಸಮಿತಿಯ ಕಾರ್ಯದರ್ಶಿ ಶ್ರೀವಾಸ್ತವ (ಉಪಕಾರ್ಯದರ್ಶಿಗಳು ಹಣಕಾಸು ಇಲಾಖೆ ಬೆಂಗಳೂರು)ಉಡುಪಿ ನಗರಸಭಾ ಆಯುಕ್ತರು ಮಹಾಂತೇಶ್ ಮತ್ತು ಕೆಯುಐಡಿಎಫ್ಸಿ ಕಾರ್ಯಪಾಲಕ ಅಭಿಯಂತರರು ದೇವರಾಜ್ ಇವರುಗಳು ಆಗಮಿಸಿ ದೇವರ ದರ್ಶನ ಪಡೆದು ಪರ್ಯಾಯ ಶೀರೂರು ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಂದ ಅನುಗ್ರಹವನ್ನು ಪಡೆದರು.

