ಪುತ್ತೂರು: ಎನ್ ಜಿ ಕ್ರಿಯೇಷನ್( NG creation) ಮತ್ತು ನವರಂಗ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುವ ವಾಗಿಶ್ ವಿ ತುಂಬೆತಡ್ಕ ನಿರ್ಮಾಣದ, ನಿರಂಜನ್ ಗೌಡ ಗುರುವಾಯನಕೆರೆ ರಚನೆ ಮತ್ತು ನಿರ್ದೇಶನದಲ್ಲಿ ಹೊಚ್ಚ ಹೊಸ ಕುತೂಹಲಕಾರಿ ಹಾಗೂ ಇತ್ತಿಚಿನ ದಿನಗಳಲ್ಲಿ ಯಾರಿಗೂ ತಿಳಿಯದಂತೆ ನಡೆಯುವ ಅಪಾಯಕಾರಿ ಜನರ ಕುರಿತಾದ ಕಥಾ ಹಂದರವಾಗಿದ್ದು ಈ ಕಥೆಯ ಮುಹೂರ್ತ ಇದೇ 14 ಭಾನುವಾರದಂದು ನಡೆಯಿತು.
ಮೈರಲಿಕೆ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಸನ್ನ ಭಟ್ ಮತ್ತು ಗುರು ಭಟ್ ಈ ಚಲನಚಿತ್ರದ ಮುಹೂರ್ತ ನೆರವೇರಿಸಿದರು. ಈ ಕಥೆಯಲ್ಲಿ ಚಲನಚಿತ್ರ ನಟ ಚಂದ್ರಹಾಸ ಶೆಟ್ಟಿ ಮಾಣಿ , ವಿಷ್ಣು ಕಲಾವಿದೆರ್ ಮದ್ದಡ್ಕ, ಸಿಂಗಾರ ಕಲಾವಿದೆರ್ ಗುರುವಾಯನಕೆರೆ, ಗಯಪದ ಕಲಾವಿದೆರ್ ಉಬಾರ್ ಹಾಗೂ ಇತರ ಕಲಾವಿದರು ನಟಿಸಲಿದ್ದಾರೆ.

