ಮೂಡುಬಿದಿರೆ: 7ನೇ ವರ್ಷದ ವಾರ್ಷಿಕೋತ್ಸವದ ಸೇವಾ ಯೋಜನೆ ಪ್ರಯುಕ್ತ ಕನ್ನಡ ಶಾಲೆಯನ್ನು ಉಳಿಸುವ ಬೆಳೆಸುವ, ಪರಿಕಲ್ಪನೆಯೊಂದಿಗೆ.
“ಜಿಲ್ಲಾ ಪಂಚಾಯತ್ ಹಿರಿಯ ಪ್ರಾರ್ಥಮಿಕ ಶಾಲೆ ಗಾಂಧಿನಗರ ಮಾರ್ಪಡಿ ಶಾಲೆ, ಪ್ರಾಂತ್ಯ ಶಾಲೆ ಹಾಗೂ ಒಂಟಿಕಟ್ಟೆ ಶಾಲೆ. ” ಒಟ್ಟು 193 ಮಕ್ಕಳಿಗೆ ನೇತಾಜಿ ಬ್ರಿಗೇಡ್ (ರಿ.) ಮೂಡುಬಿದಿರೆ ವತಿಯಿಂದ” ಉಚಿತ ಬರೆಯುವ ಪುಸ್ತಕಗಳನ್ನು” ವಿತರಿಸಲಾಯಿತು.
ಈ ಸಂದರ್ಭದಲ್ಲಿ ನೇತಾಜಿ ಬ್ರಿಗೇಡ್ ನ ಪೋಷಕರಾದ ಗಿರೀಶ್ ಕುಮಾರ್ ಗಿರಿ ಕನ್ಸ್ಟ್ರಕ್ಷನ್, ಸೇವಾ ಯಜ್ಞ ಟ್ರಸ್ಟ್ ಸ್ಥಾಪಕರು ಪುರಸಭಾ ನಿಖಟ ಪೂರ್ವ ಉಪಾಧ್ಯಕ್ಷರು ನಮ್ಮ ಸಂಸ್ಥೆಯ ಗೌರವ ಸಲಹೆಗರರಾದ ನಾಗರಾಜ್ ಪೂಜಾರಿ, ನಿಖಟ ಪೂರ್ವ ಪುರಸಭಾ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಕೇಶವ್, ಗ್ಯಾರೇಜ್ ಮಾಲಕರ ಸಂಘ ಮೂಡುಬಿದಿರೆ ಘಟಕದ ಕಾರ್ಯದರ್ಶಿ ಪ್ರಕಾಶ್ ಅಮೀನ್, ಕಟೀಲು ಅಜಾರು ಗುತ್ತು ವಿಜಯ್ ಶೆಟ್ಟಿ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಸುನೀತಾ, ಮಾಜಿ ಪುರಸಭಾ ಸದಸ್ಯೆ ದಿವ್ಯ ಜಗದೀಶ್, ಮುಖ್ಯ ಶಿಕ್ಷಕರಾದ ಕಸ್ತೂರಿ ಎಚ್, ಸುಧಾಕರ್ ಎಲ್ವಿರ ಜನಿಫರ್ ಪಿಂಟೋ , ನೇತಾಜಿ ಬ್ರಿಗೇಡ್ ಸ್ಥಾಪಕರಾದ ರಾಹುಲ್ ಕುಲಾಲ್ , ಅಧ್ಯಕ್ಷರಾದ ದಿನೇಶ್ ಶೆಟ್ಟಿ , ಪದಾಧಿಕಾರಿಗಳಾದ ಎಸ್ ಕುಮಾರ್ , ಅಭಿಷೇಕ್ ಸಾಲ್ಯಾನ್, ಶ್ರೀಮತಿ ನಂದ , ನವೀನ್, ನಿತ್ಯಾನಂದ, ಪೂರ್ಣಚಂದ್ರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

