ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆಯಲ್ಲಿ ಕಾರ್ಯಚರಿಸುತ್ತಿರುವ ವಂದೇ ಮಾತರಂ ಸೌಹಾರ್ದ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಅವಿರೋಧ ಆಯ್ಕೆ ಜರಗಿರುತ್ತದೆ. ಅವಿರೋಧ ಆಯ್ಕೆಯಿಂದಾಗಿ ನಾಳೆ ನಡೆಯಬೇಕಾಗಿದ್ದ ಚುನಾವಣೆ ರದ್ದುಗೊಂಡಿರುತ್ತದೆ ಎಂದು ಕಾರ್ಯನಿರ್ವಹಣಾಧಿಕಾರಿ ಸುಕೇಶ್ ನಿಡ್ಡೋಡಿ ತಿಳಿಸಿರುತ್ತಾರೆ.
ಮುಂದಿನ ಐದು ವರ್ಷಗಳಿಗೆ ಅವಿರೋಧವಾಗಿ ಆಯ್ಕೆಗೊಂಡವರು ಎಂ ವಾಸುದೇವ ಭಟ್, ಕೇಶವ ಹೆಗ್ಡೆ, ಶ್ಯಾಮ ಹೆಗ್ಡೆ, ಪ್ರದೀಪ್ ಸಿ, ಶಂಕರನಾರಾಯಣ ಬೋರ್ಕರ್, ಮಂಜುನಾಥ್ ಶೆಟ್ಟಿ, ಶಾಂತಾ ರಾಮ ಕುಡ್ವ, ಸದಾನಂದ ನಾರಾವಿ, ರಾಜೇಶ್ ಎಂ, ರೋಹನ್ ಬಂಗೇರ, ವಿಜಯ್ ಕುಮಾರ್ ಶೆಟ್ಟಿ, ಕೃಷ್ಣಪ್ಪ, ಪೂರ್ಣಿಮಾ, ಉಮಾವತಿ, ಸುಷ್ಯಾವತಿ.

