
ಮಂಗಳೂರು : ತುಳುನಾಡಿನ ಸಾಂಪ್ರದಾಯಿಕ ಆಟಿ ಅಮಾವಾಸ್ಯೆ ಆಚರಣೆಯ ಅಂಗವಾಗಿ ಡಿಂಕಿ ಡೈನ್ ಹಾಗೂ ತುಳುವ ಬೊಳ್ಳಿ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 12 ಬುಧವಾರದಂದು ‘ಮರ್ದ್ಗಂಜಿ ಪಟ್ಟುನ ಲೇಸ್’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮವು ಆಗಸ್ಟ್ 12ರಂದು ಸಂಜೆ 6.00 ಗಂಟೆಗೆ ಡಿಂಕಿ ಡೈನ್ ಆವರಣದಲ್ಲಿ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಟಿ ಅಮಾವಾಸ್ಯೆಯ ವಿಶೇಷ ಕಷಾಯ ಹಾಗೂ ಗಂಜಿಯನ್ನು ಸವಿಯುವಂತೆ ಆಹ್ವಾನಿಸಲಾಗಿದೆ.
